ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಯೋಫಾರ್ಮಾ ಶಕ್ತಿ ಕಾರ್ಯಕ್ರಮವನ್ನು ಘೋಷಿಸುತ್ತ ಭಾರತವನ್ನು ಬಯೋಫಾರ್ಮಾ ಹಬ್ ( ಜೈವಿಕ ಔಷಧಿ ಕೇಂದ್ರ) ಆಗಿ ರೂಪಿಸುವ ಮಹತ್ವಾಕಾಂಕ್ಷೆಯ ಉದ್ದೇಶವನ್ನು ಪ್ರಕಟಿಸಿದ್ದಾರೆ. ಈ ಕಾರ್ಯಕ್ರಮವು ಔಷಧಿ ತಯಾರಿಕೆ, ಬಯೋಟೆಕ್ನಾಲಜಿ, ಸಂಶೋಧನೆ ಮತ್ತು ರಫ್ತು ಸಾಮರ್ಥ್ಯವನ್ನು ಹೆಚ್ಚಿಸಲು ದಿಕ್ಕು ನೀಡಲಿದೆ.
ಸೇರ್ಪಡೆಗೊಂಡ 10,000 ಕೋಟಿ ರೂಪಾಯಿ ಅನುದಾನವು ಉದ್ಯೋಗ ಸೃಷ್ಟಿ ಸಂಶೋಧನೆ ಮತ್ತು ಆರೋಗ್ಯ ವಲಯದಲಿ ದೇಶದ ಅಂತಾರಾಷ್ಟ್ರೀಯ ಸ್ಥಾನಮಾನವನ್ನು ಬಲಪಡಿಸಲು ಸಹಾಯ ಮಾಡಲಿದೆ. ಬಯೋಫಾರ್ಮಾ ಉದ್ಯಮದಲ್ಲಿ ಭಾರತವನ್ನು ಜಾಗತಿಕ ಹಬ್ಗಾಗಿ ರೂಪಿಸುವ ಈ ಯೋಜನೆ ಬಜೆಟ್ 2026ರಲ್ಲಿ ಮುಖ್ಯ ಆರ್ಥಿಕ ಗುರಿಗಳಲ್ಲೊಂದು ಒಂದು ಗಮನಿಸಲಾಗಿದೆ.
ನವದೆಹಲಿ: ಮುಂದಿನ ಐದು ವರ್ಷಗಳ ಅವಧಿಯಲ್ಲಿ ಭಾರತದ ಬಯೋಫಾರ್ಮಾ ವಲಯವನ್ನು ' ಬಯೋಫಾರ್ಮಾ ಶಕ್ತಿ ಕಾರ್ಯಕ್ರಮ ದಡಿ ಅಭಿವೃದ್ಧಿಪಡಿಸುವ ಉದ್ದೇಶದೊಂದಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು 10,000 ಕೋಟಿ ರೂ. ಘೋಷಣೆ ಮಾಡಿದರು.
ಈ ಯೋಜನೆಯು ಬಯೋಫಾರ್ಮಾ ಮತ್ತು ಬಯೋ ಸಿಮಿಲರ್ ವಲಯಗಳಿಗೆ ಪರಿಸರ ವ್ಯವಸ್ಥೆ ನಿರ್ಮಿಸುವುದನ್ನು ಗುರಿಯಾಗಿಸಿಕೊಂಡಿದ್ದು ಕಾರ್ಯತಂತ್ರ ಮತ್ತು ಗಡಿನಾಡಿನ ವಲಯಗಳಲ್ಲಿ ಉತ್ಪಾದನೆ ಹೆಚ್ಚಿಸುವುದು ಮತ್ತು ನಗರ ಆರ್ಥಿಕ ಪ್ರದೇಶಗಳನ್ನು ಅಭಿವೃದ್ಧಿಪಡಿಸುವುದನ್ನು ಸಹ ಒಳಗೊಂಡಿದೆ ಎಂದು ವಿತ್ತ ಸಚಿವೆ ತಮ್ಮ ಬಜೆಟ್ ಭಾಷಣದಲ್ಲಿ ತಿಳಿಸಿದರು.
ಬಿಜೆಪಿ ಸರ್ಕಾರ ಅಧಿಕಾರವಹಿಸಿಕೊಂಡ ಭಾರತೀಯ ಆರ್ಥಿಕತೆಯು ಹಣಕಾಸಿನ ಶಿಸ್ತು ಮತ್ತು ನಿರಂತರ ಬೆಳವಣಿಗೆದೊಂದಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ವಾಕ್ಚಾತುರ್ಯಕ್ಕಿಂತ ಸುಧಾರಣೆಯನ್ನು ಪ್ರಾಥಮ್ಯ ನೀಡಿದು ಆತ್ಮನಿರ್ಬರತೆ ಮತ್ತು ಸ್ವಾವಲಂಬನೆಯನ್ನು ದಿಕ್ಸೂಚಿಯಾಗಿ ರೂಪಿಸಿಕೊಂಡಿದೆ ಎಂದು ನಿರ್ಮಲಾ ಸೀತಾರಾಮನ್ ಒತ್ತಿ ಹೇಳಿದರು.
ಈ ಬಯೋಫಾರ್ಮಾ ಶಕ್ತಿ ಕಾರ್ಯಕ್ರಮದ ಮೂಲಕ ಭಾರತವನ್ನು ಜಾಗತಿಕ ಹಬ್ಗಾಗಿ ರೂಪಿಸುವ ದೀರ್ಘಕಾಲಿನ ಯೋಜನೆ ಬಜೆಟ್ 2026ನಲ್ಲಿ ಪ್ರಮುಖ ಆರ್ಥಿಕ ಗುರಿಗಳೊಂದು ಎಂದು ತಜ್ಞರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೇಳಿದರು ನಾವು 12 ವರ್ಷಗಳ ಹಿಂದೆ ಅಧಿಕಾರ ವಹಿಸಿಕೊಂಡ ಬಳಿಕ ಭಾರತದ ಆರ್ಥಿಕ ಪಥವು ಸ್ಥಿರತೆ, ಮತ್ತು ಹಣಕಾಸಿನ ಶಿಸ್ತು, ನಿರಂತರ ಬೆಳವಣಿಗೆ ಮತ್ತು ಮಧ್ಯಮ ಹಣ ದುಬ್ಬರದಿಂದ ಗುರುತಿಸಲ್ಪಟ್ಟಿದೆ ಎಂದು.
ಇದು ಅವರು ಸಂಸತ್ತಿನಲ್ಲಿ ತಮ್ಮ ದಾಖಲೆಯ 9ನೇ ಕೇಂದ್ರ ಬಜೆಟ್ ಅನ್ನು ಮಂಡಿಸುತ್ತಿದ್ದಾರೆ. ಈ ಬಜೆಟ್ ಮಂಡನೆಗೆ ಮುನ್ನ ಗುರುವಾರ ಅವರು 2025 - 26ರ ಹಣಕಾಸು ವರ್ಷದ ಭಾರತದ ಆರ್ಥಿಕ ಸಮೀಕ್ಷೆಯನ್ನು ಸಂಸತ್ತಿನಲ್ಲಿ ಮಂಡಿಸಿದರು. ಆರ್ಥಿಕ ಸಮೀಕ್ಷೆಯು ಹಿಂದಿನ ವರ್ಷದ ಆರ್ಥಿಕ ಕಾರ್ಯಕ್ಷಮತೆಯನ್ನು ಸಮಗ್ರವಾಗಿ ವಿಮರ್ಶಿಸುವ ದತ್ತಾಂಶಗಳನ್ನು ಒದಗಿಸುತ್ತದೆ ಮತ್ತು ಮುಂದಿನ ಬಜೆಟ್ ನಿರ್ಣಯಗಳಿಗೆ ಆಧಾರ ನೀಡುತ್ತದೆ.
ಈ ಬಾರಿ ಬಜೆಟ್ ಕೇಂದ್ರೀಕೃತವಾಗಿದೆ: ಆರ್ಥಿಕ ಸ್ಥಿರತೆ ಬಂಡವಾಳ ಹೂಡಿಕೆ ತೆರಗಿಸುಧಾರಣೆ ಮತ್ತು ಸಾರ್ವಜನಿಕ ಸಾಲದ ನಿಯಂತ್ರಣ ಹೂಡಿಕೆದಾರರು ಉದ್ಯಮ ವಲಯ ಮತ್ತು ಸಾರ್ವಜನಿಕರು ಬಜೆಟ್ ಘೋಷಣೆಗಳ ಮೇಲೆ ವಿಶೇಷ ಗಮನಹರಿಸಿದ್ದಾರೆ.
ಕೇಂದ್ರ ಬಜೆಟ್ ಗೆ ಮುಂಚಿತವಾಗಿ ಆರ್ಥಿಕ ಸಮೀಕ್ಷೆಯನ್ನು ಮಂಡಿಸುವುದು ದೀರ್ಘಕಾಲದಿಂದ ಸಾಂಪ್ರದಾಯಿಕವಾಗಿದೆ. ಬಜೆಟ್ ಘೋಷಣೆಗೂ ಮುನ್ನ ದೇಶದ ಆರ್ಥಿಕತೆಯ ಸ್ಥಿತಿ ಹಿಂದಿನ ವರ್ಷದ ಕಾರ್ಯ ಕ್ಷಮತೆ ಮತ್ತು ಭವಿಷ್ಯದ ನೀತಿ ನಿರ್ಧಾರಗಳಿಗೆ ಮಾರ್ಗ ಸೂಚಿವಲಯದ ಮೂಲಕ ಒದಗಿಸಲಾಗುತ್ತದೆ. ಇದು ಸರ್ಕಾರದ ಪ್ರಮುಖ ವಾರ್ಷಿಕ ಆರ್ಥಿಕ ವರದಿಯಾಗಿ ಇದರಿಂದ ಕಳೆದ 12 ತಿಂಗಳಲ್ಲಿ ದೇಶದ ಮುಖ್ಯ ಆರ್ಥಿಕ ಬೆಳವಣಿಗೆಗಳು ಮತ್ತು ಆರ್ಥಿಕ ದತ್ತಾಂಶವನ್ನು ಸಮಗ್ರವಾಗಿ ತಿಳಿಸುತ್ತದೆ.
2026-27ರ ಹಣಕಾಸು ವರ್ಷಕ್ಕೆ ಭಾರತದ ನೈಜ GDP ಬೆಳವಣಿಗೆ ಶೇಕಡಾ 6.8 - 7.2 ನಿರೀಕ್ಷಿಸಲಾಗಿದೆ ಜಾಗತಿಕ ಸವಾಲುಗಳ ನಡುವೆ ಈ ಪ್ರಗತಿ ನಿರಂತರ ಮಾಧ್ಯಮ ವರದಿಯ ಬೆಳವಣಿಗೆ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ.
ಹಣದುಬ್ಬರದ ದೃಷ್ಟಿಯಿಂದ ಸಿಪಿಐ ಸರಣಿಯ ಆರಂಭದಿಂದಲೂ ಭಾರತವು ತೀವ್ರವಾಗಿ ಕಡಿಮೆ ಹಣದುಬ್ಬರ ದರವನ್ನು ದಾಖಲಿಸಿದೆ. ಏಪ್ರಿಲ್ ಡಿಸೆಂಬರ್ 2025ರ ಸರಾಸರಿ ಮುಖ್ಯ ಹಣದುಬ್ಬರ ಶೇಕಡಾ 1.7 ಮಟ್ಟದಲ್ಲಿದ್ದು, ಆಹಾರ ಮತ್ತು ಇಂಧನ ಬೆಲೆಗಳಲ್ಲಿನ ಸಾಮಾನ್ಯ ಏರಿಳಿತಕ್ಕೆ ಕಾರಣವಾಗಿದೆ ಭವಿಷ್ಯದಲ್ಲಿ ಹಣ ದುಬ್ಬರದ ಮುನ್ನೋಟವು ಅನುಕೂಲಕರವಾಗಿದೆ. ಇದು ಆರ್ಥಿಕ ಸ್ಥಿರತೆ ಮತ್ತು ಬಂಡವಾಳ ಹೂಡಿಕೆಗಳಿಗೆ ಪ್ರೇರಣೆಯಾಗಿಸುತ್ತದೆ.
ಇನ್ನಷ್ಟು ಓದಿರಿ:
7 ವರ್ಷಗಳ ಬಳಿಕ ಅಮೆರಿಕಾ–ವೆನೆಜುವೆಲಾ ರಾಜತಾಂತ್ರಿಕ ಸಂಬಂಧ ಪುನರಾರಂಭ