<?= $pageTitle ?>
Logo
ಮುಖಪುಟ ಓದುವುದು ಕೇಳು
Breaking News

ಕರ್ನಾಟಕ ಮೂಲದ ‘ಸಿಂಗಾಪುರದ ವೃಕ್ಷಮಾತೆ’ ಇನ್ನಿಲ್ಲ

ಕರ್ನಾಟಕ ಮೂಲದ ‘ಸಿಂಗಾಪುರದ ವೃಕ್ಷಮಾತೆ’ ಇನ್ನಿಲ್ಲ
Summary: ಕರ್ನಾಟಕದ ಮೂಲದ ಪರಿಸರ ಪ್ರೇಮಿ : ೭೬೦೦೦ ಕ್ಕೂ ಹೆಚ್ಚು ಗಿಡ - ಮರಗಳನ್ನು ಬೆಳೆಸಿ ಮತ್ತು ಪೋಷಿಸಿ ಸಿಂಗಾಪುರದ ವೃಕ್ಷಮಾತೆ ಎಂದೇ ಪ್ರಖ್ಯಾತಿ ಹೊಂದಿದ ಕೀರ್ತಿದಾ ಮೆಕಾನಿ ರವರು ಇನಿಲ್ಲ.
belagavi news :

ಪರಿಸರ ಪ್ರೇಮಿ ಹೃದಯಾಘಾತದಿಂದ ನಿಧನ : ಕರ್ನಾಟಕ ಮೂಲದ ಸಿಂಗಾಪುರ ಪರಿಸರ ಪ್ರೇಮಿ ಕೀರ್ತಿದಾ ಮೆಕಾನಿ ಅವರು ಬುಧವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. 66 ವರ್ಷದ ಮೆಕಾನಿ ಸಿಂಗಾಪುರದ ಪರಿಸರ ಸುಸ್ಥಿರತೆ, ಸಮುದಾಯ ಸೇವೆ ಮತ್ತು ಸಾಂಸ್ಕೃತಿಕ ಪರಂಪರೆ ಕ್ಷೇತ್ರದಲ್ಲಿ ವಿಶಿಷ್ಟವಾಗಿ ಗುರುತಿಸಿಕೊಂಡಿದ್ದರು. ಪರಿಸರ ಕಾರ್ಯಕ್ಕಾಗಿ ಸಿಂಗಾಪುರದ ಅಧ್ಯಕ್ಷೀಯ ಪ್ರಶಸ್ತಿ ಪಡೆದಿದ್ದರು, ಅಲ್ಲದೆ 2024ರಲ್ಲಿ ಸಿಂಗಾಪುರ ಮಹಿಳಾ ಹಾಲ್ ಆಫ್ ಫ್ರೆಮ್ ಗೆ ಸಹ ಭಾಜನರಾಗಿದ್ದರು. ದ್ವೀಪ ರಾಷ್ಟ್ರದಲ್ಲಿ ಪರಿಸರ, ಸಮುದಾಯ ಉದ್ಯಾನಗಳು, ಶಿಕ್ಷಣ ಸಂಸ್ಥೆಗಳು ಮತ್ತು ಸಾಂಸ್ಕೃತಿಕ ಹೆಗ್ಗುರುತುಗಳಲ್ಲಿ ಮೆಕಾನಿ ಅವರು ತಮ್ಮ ವಿಶಿಷ್ಟ ಚಾಪು ಮೂಡಿಸಿದರು, ಅವರ ಸೇವೆ ಮತ್ತು ಪರಿಶ್ರಮವು ಸಿಂಗಾಪುರದ ಪರಿಸರ ಹಾಗೂ ಸಮುದಾಯ ಅಭಿವೃದ್ಧಿಗೆ ದೀರ್ಘಕಾಲ ಪ್ರಭಾವ ಬೀರಿತು ಎಂದು ಆನ್ಲೈನ್ ಟ್ಯಾಬ್ಲಾಯ್ಡ್ ತಬಲಾ ವರದಿ ಮಾಡಿದೆ. ಕೀರ್ತಿದಾ ನಿಧನದಿಂದ ಸಿಂಗಾಪುರದ ಪರಿಸರ ಮತ್ತು ಸಮುದಾಯ ಕ್ಷೇತ್ರದಲ್ಲಿ ಶೋಚನೀಯ ಗಂಭೀರ ನಷ್ಟ ಅನುಭವಿಸಿದೆ.


1990ರಲ್ಲಿ ಪತಿ ಭರತ ಮೆಕಾನಿಯವರೊಂದಿಗೆ ಸಿಂಗಾಪುರಕ್ಕೆ ತೆರಳಿದ ಕೀರ್ತದಾ ಮೆಕಾನಿ ಅಲ್ಲಿ ಪರಿಸರ ಸಂರಕ್ಷಣೆ ಮತ್ತು ಸಮುದಾಯ ಅಭಿವೃದ್ಧಿ ಯೋಜನೆಗಳಲ್ಲಿ ತೊಡಗಿಸಿಕೊಂಡರು. ಮೆಕಾನಿಯವರು ತಳಮಟ್ಟದ ಪರಿಸರ ಶಿಕ್ಷಣ ಕ್ಷೇತ್ರದಲ್ಲಿ ಆಳವಾದ ಕೆಲಸ ಮಾಡಿ ಯುವ ನಾಯಕರು ಮತ್ತು ಪರಿಸರಸ್ನೇಹಿ ಸಂಸ್ಥೆಗಳಿಗೆ ಮಾರ್ಗದರ್ಶನ ಮತ್ತು ಸಲಹೆ ನೀಡುತ್ತಿದ್ದರು. ಅವರ ಕಾರ್ಯಕ್ಷೇತ್ರವು ಪರಿಸರ ಸುಸ್ಥಿರತೆ , ಸಮುದಾಯ ಉದ್ಯಾನಗಳು ಮತ್ತು ಪರಿಸರ ಶಿಕ್ಷಣದ ವಿಸ್ತೃತ ಪ್ರಭಾವವನ್ನು ಮೂಡಿಸುತ್ತಿದೆ. 1990ರ ನಂತರದಲ್ಲಿಯೇ ಕೀರ್ತದಾ ಸೇವೆಯು ಸಿಂಗಾಪುರ ಪರಿಸರ ಮತ್ತು ಸಮುದಾಯ ಅಭಿವೃದ್ಧಿ ಕ್ಷೇತ್ರದಲ್ಲಿ ಹೊಸ ಪ್ರೇರಣೆ ನೀಡಿದೆ. ಗಾರ್ಡನ್ ಸಿಟಿ ಫಂಡ್ ಅಡಿಯಲ್ಲಿ ಮತ್ತು ಸಿಂಗಾಪುರ ರಾಷ್ಟ್ರೀಯ ಉದ್ಯಾನಗಳ ಮಂಡಳಿ ಸಹಭಾಗಿತ್ವದಲ್ಲಿ 2007ರಲ್ಲಿ ಪ್ರಾರಂಭವಾದ ಪ್ಲಾಂಟ್-ಎ-ಟ್ರೀ ಕಾರ್ಯಕ್ರಮದ ಪರಿಸರ ಸುಸ್ಥಿರತೆಯಲ್ಲಿ ಮಹತ್ವದ ಹೆಜ್ಜೆ ಆಗಿದೆ. ಕೀರ್ತದಾ ಮೆಕಾಲಿ ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಮರಗಳನ್ನು ನೆಟ್ಟು ಪರಿಸರದ ಸುಧಾರಣೆಗೆ ತಮ್ಮ ಅಮೂಲ್ಯ ಕೊಡುಗೆ ನೀಡಿದ್ದಾರೆ. ಈ ಯೋಜನೆ ಸಿಂಗಾಪುರದಲ್ಲಿ ಹಸಿರು ಪರಿಸರವನ್ನು ರಕ್ಷಿಸುವ ಮತ್ತು ಸಮುದಾಯ ತಳಮಟ್ಟದಲ್ಲಿ ಪರಿಸರ ಬೋಧನೆಗಾಗಿ ಪ್ರಸಿದ್ಧವಾಗಿದೆ. ಮೆಕಾಲಿಯ ಪಾಲ್ಗೊಳ್ಳುವಿಕೆ ಪರಿಸರಸ್ನೇಹಿ ಸಮುದಾಯ ಒಗ್ಗಟ್ಟು ಮತ್ತು ಹಸಿರು ನಗರ ನಿರ್ಮಾಣದ ಮೂಲಕ ಅವರ ಸೇವೆಯನ್ನು ಇನ್ನೂ ಹೆಮ್ಮೆಯ ಕಾರ್ಯಗಳಲ್ಲಿ ಒಂದಾಗಿ ಮಾಡಿದೆ.


ವೃಕ್ಷ ಮಹಿಳೆ ಎಂದು ಕರೆಯಲ್ಪಡುವ ಕೀರ್ತದಾ ಮೆಕಾನಿ ಅವರ ನಿಧನವು ಸಿಂಗಾಪುರದ ಪರಿಸರ ಕಲಾ ಮತ್ತು ನಾಗರಿಕ ಸಮುದಾಯಕ್ಕೆ ಮಹತ್ವದ ನಷ್ಟವನ್ನು ಉಂಟು ಮಾಡಿದೆ. ಮೂರು ದಶಕಗಳಿಂದ ಹೆಚ್ಚು ಕಾಲ ಸದ್ದಿಲ್ಲದೆ ಮತ್ತು ನಿರ್ಣಾಯಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು ಎಂಬುದು ವರದಿ ತಿಳಿಸಿದೆ. ಮೆಕಾನಿ ಕರ್ನಾಟಕದಲ್ಲಿ ಹುಟ್ಟಿ ಬೆಳೆದವರು ತಮ್ಮ ಜಮೀನು ಮತ್ತು ಸ್ಥಳೀಯ ಪರಿಸರದಿಂದ ಪ್ರಕೃತಿ ಪ್ರೀತಿ ಬೆಳೆಸಿಕೊಂಡಿದ್ದರು. ಅವರು ಸ್ಥಳೀಯ ನಾರಿನ ಕಾಂಪೋಸ್ಟ್ ಪಿಟ್ ಅನ್ನು ಫಲವತ್ತಾದ ಮಣ್ಣಾಗಿ ಪರಿವರ್ತಿಸಿ ಪ್ರಕೃತಿಯ ಪುನರುತ್ಪಾದಕ ಶಕ್ತಿಗಳತ್ತ ಗಮನಹರಿಸಿದ್ದರು. ಪ್ರಕೃತಿಯನ್ನು ಅರ್ಥ ಮಾಡಿಕೊಂಡರೆ, ಗೌರವಿಸಿದರೆ, ಮಾನವೀಯತೆಗೆ ಸುಸ್ಥಿರವಾಗಿ ಬದುಕುವುದು ಹೇಗೆ ಎಂಬುದು ಗೊತ್ತಾಗುತ್ತದೆ ಎಂದು ಅವರು ತಮ್ಮ ಜೀವನದ ಮೂಲಕ ಪ್ರತಿಪಾದಿಸಿದರು. ಅವರ ಈ ಅಮೂಲ್ಯ ಸೇವೆ ಪರಿಸರ ಪ್ರೇಮಿಗಳು ಮತ್ತು ಸಮುದಾಯ ಸೇವೆ ಮಾಡುವವರಿಗೆ ದೀರ್ಘಕಾಲ ಪ್ರೇರಣೆಯಾಗಿದೆ.


ವೃಕ್ಷ ಮಹಿಳೆ ಎಂದು ಪ್ರಸಿದ್ಧರಾದ ಕೀರ್ತದಾ ಮೆಕಾನಿ 76,000 ಕ್ಕಿಂತ ಹೆಚ್ಚು ಮರಗಳನ್ನು ನೆಟ್ಟು ಪರಿಸರ ಸುಸ್ಥಿರತೆಯಲ್ಲಿ ಅಮೂಲ್ಯ ಕೊಡುಗೆ ನೀಡಿದ್ದಾರೆ. ಇವುಗಳಲ್ಲಿ ಎರಡು ನೂರಕ್ಕೂ ಹೆಚ್ಚು ಸ್ಥಳೀಯ ಜಾತಿಗಳನ್ನು ಪರಿಚಯಿಸಿ ಸಿಂಗಾಪುರದ ಹಸಿರು ವೈವಿಧ್ಯತೆಯನ್ನು ಪೋಷಿಸಿದರು. ಮೆಕಾನಿ ಸಿಂಗಾಪುರದಲ್ಲಿ ನಾಗರಿಕ ಚಾಲಿತ ಹಸಿರು ಉಪಕ್ರಮಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡು, ನಗರ ಪರಿಸರ ಸುಧಾರಣೆಗೆ ಪ್ರಮುಖ ಪಾತ್ರ ವಹಿಸಿದರು. 2016ರಲ್ಲಿ ಅವರು ಬಯೋಮಿಮಿಕ್ರಿ ಸಿಂಗಾಪುರ್ ನೆಟ್ವರ್ಕ್ ಸ್ಥಾಪಿಸಿ, ವಿಜ್ಞಾನಿಗಳು, ವಿನ್ಯಾಸಕರು, ಇಂಜಿನಿಯರ್ ಗಳು ಮತ್ತು ಉದ್ಯಮಿಗಳನ್ನು ಸೇರಿಸಿ ಪ್ರಕೃತಿ ಪ್ರೇರಿತ ನಾವಿನ್ಯತೆಯನ್ನು ಅನ್ವೇಷಿಸಲು ವೇದಿಕೆ ಸಿದ್ಧಪಡಿಸಿದರು. ಅವರಿಗೆ 2015 ಪರಿಸರಕ್ಕಾಗಿ ಅಧ್ಯಕ್ಷೀಯ ಪ್ರಶಸ್ತಿ, ಸಿಂಗಾಪುರ್ ಅತ್ಯುನ್ನತ ಗೌರವ ಪರಿಸರ ಗೌರವ ಸಿಕ್ಕಿತು. 2024ರಲ್ಲಿ ಪರಿಸರ ಚಾಂಪಿಯನ್, ಸಿಂಗಾಪುರ ಮಹಿಳಾ ಹಾಲ್ ಆಫ್ ಪ್ರೇಮ ಪ್ರಶಸ್ತಿಗಳು ಅವರಿಗೆ ದೊರೆತವು.


ಇನ್ನಷ್ಟು ಓದಿರಿ:


2026 ಗಣರಾಜ್ಯೋತ್ಸವ: ದೆಹಲಿಯಲ್ಲಿ ಕರ್ನಾಟಕದ ಸ್ತಬ್ಧಚಿತ್ರ ಬಹಿರಂಗ!

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online