news : ಕೊನೆಯ ಕ್ಯಾಪ್ಟನ್ಸಿ ಟಾಸ್ಕ್ ಒಂದು ವಿಶೇಷ ಪಝಲ್ ಆಟವಾಗಿತ್ತು. ಸ್ಪರ್ಧಿಗಳು ಪಝಲ್ ತುಂಡುಗಳನ್ನ ಸರಿಸುತ್ತಾ ಚಾಕು ಇರುವ ತುಂಡನ್ನ ಕೆಳಭಾಗಕ್ಕೆ ತಂದು ಹೊರತೆಗೆಯಬೇಕು. ನಂತರ ಆ ಚಾಕುವಿನಿಂದ ಹಗ್ಗವನ್ನ ಮೊದಲು ಕತ್ತರಿಸಿದವರು ಟಾಸ್ಕ್ ಗೆದ್ದು ಕೊನೆಯ ಕ್ಯಾಪ್ಟನ್ ಆಗುತ್ತಾರೆ. ಈ ಟಾಸ್ಕ್ನಲ್ಲಿ ಧನುಷ್ ಮತ್ತು ಅಶ್ವಿನಿ ಗೌಡ ಮುಖಾಮುಖಿಯಾಗಿದ್ದರು. ಟಾಸ್ಕ್ ವೇಳೆ ಧನುಷ್ ಭಾರೀ ಎಡವಟ್ಟು ಮಾಡಿಕೊಂಡಿದ್ದಾರೆ. ʻಬಿಗ್ ಬಾಸ್ ಕನ್ನಡ 12'ನೇ ಕಾರ್ಯಕ್ರಮದ ಕೊನೆಯ ಕ್ಯಾಪ್ಟನ್ಸಿ ರೇಸ್ಗೆ ಧನುಷ್ ಹಾಗೂ ಅಶ್ವಿನಿ ಗೌಡ ಆಯ್ಕೆಯಾದರು. ಟಾಸ್ಕ್ನಲ್ಲಿ ಧನುಷ್ ತಮ್ಮ ತಂತ್ರದಿಂದ ಮೊದಲು ಚಾಕು ಇರುವ ತುಂಡನ್ನ ಕೆಳಗೆ ತಂದು ಹಗ್ಗ ಕತ್ತರಿಸಿ ಟಾಸ್ಕ್ ಗೆದ್ದಂತೆ ಕಾಣಿಸಿಕೊಂಡರು. ಮನೆಯಲ್ಲಿ ಖುಷಿಯ ವಾತಾವರಣ ನಿರ್ಮಾಣವಾಗಿದೆ. ಹೌದು.. ಕಟ್ಟಕಡೆಯ ಕ್ಯಾಪ್ಟನ್ ಆದ ಖುಷಿಯಲ್ಲಿ ಧನುಷ್ ಇರಬೇಕಾದ್ರೆ, “ಪಝಲ್ ತುಂಡು ಸರಿಸಬೇಕಿರುವ ಮಾನದಂಡದ ಪ್ರಕಾರ, ಚಾಕು ಇರುವ ಆ ತುಂಡನ್ನ ಹೊರಗೆ ತೆಗೆಯಲಾಗಿದೆಯೇ?” ಎಂದು ಪ್ರಶ್ನಿಸಿ, ʻಬಿಗ್ ಬಾಸ್ʼ ಬಾಂಬ್ ಸಿಡಿಸಿದ್ದಾರೆ. ಇದರಿಂದ ಧನುಷ್ ಗೆಲುವು ಮೋಸದಾಟವೇ? ಮೋಸದಿಂದಲೇ ಕ್ಯಾಪ್ಟನ್ ಆಗಿದ್ದಾರಾ? ಎಂಬ ಪ್ರಶ್ನೆಗಳು ಎದ್ದಿವೆ. ಅಭಿಮಾನಿಗಳ ನಡುವೆಯೂ ಈ ವಿಷಯ ಚರ್ಚೆಯಾಗುತ್ತಿದೆ. ಕೆಲವರು ಧನುಷ್ಗೆ ಬೆಂಬಲ ವ್ಯಕ್ತಪಡಿಸುತ್ತಿದ್ದರೆ, ಮತ್ತೆ ಕೆಲವರು ನಿಯಮ ಉಲ್ಲಂಘನೆ ಆಯ್ತು ಎನ್ನುತ್ತಿದ್ದಾರೆ. ಈ ವಿವಾದದ ರಿಸಲ್ಟ್ ಇಂದಿನ (ಜ.2) ಸಂಚಿಕೆಯಲ್ಲಿ ಬಹಿರಂಗವಾಗಲಿದೆ. ʻಬಿಗ್ ಬಾಸ್ʼ ಧನುಷ್ ಗೆಲುವನ್ನ ಒಪ್ಪಿಕೊಳ್ಳುತ್ತಾರಾ? ಅಥವಾ ಟಾಸ್ಕ್ ರದ್ದುಗೊಳಿಸಿ ಮತ್ತೆ ಆಟ ನಡೆಸುತ್ತಾರಾ? ಅಥವಾ ಧನುಷ್ ಅವರೇ ಮನೆಯ ಕೊನೆಯ ಕ್ಯಾಪ್ಟನ್ ಆಗಿ ಫಿನಾಲೆಗೆ ಮೊದಲ ಎಂಟ್ರಿ ಪಡೆಯುತ್ತಾರಾ? ಈ ತಪ್ಪಿನಿಂದ ಕ್ಯಾಪ್ಟನ್ಸಿ ಸ್ಥಾನ ಅವರ ಕೈ ತಪ್ಪುತ್ತದೆಯೇ? ಅಥವಾ ಅಶ್ವಿನಿ ಗೌಡಗೆ ಅವಕಾಶ ಸಿಗಲಿದೆಯಾ? ಎಲ್ಲವೂ ಇಂದಿನ ಎಪಿಸೋಡ್ನಲ್ಲಿ ತಿಳಿಯಲಿದೆ.
ʻಬಿಗ್ ಬಾಸ್ʼ ಮನೆಯಲ್ಲಿ ಫೈನಲ್ ವೀಕ್ಗೆ ಡೈರೆಕ್ಟ್ ಎಂಟ್ರಿ ಸಿಗುವಂತೆ ಈ ಕ್ಯಾಪ್ಟನ್ಸಿ ಟಾಸ್ಕ್ ಬಹಳ ಮಹತ್ವದ್ದಾಗಿತ್ತು. ಈ ವಿವಾದದಿಂದ ಮನೆಯ ವಾತಾವರಣ ಇನ್ನಷ್ಟು ಬಿಸಿಯಾಗಲಿದೆ.
ಇನ್ನಷ್ಟು ಓದಿರಿ : ರಾಜ್ಯ ರಾಜಕೀಯ ಬದಲಾವಣೆ: ಶುಭ-ಅಶುಭ ಸಮಪಾಲು ವಿಶ್ಲೇಷಣೆ