<?= $pageTitle ?>
Logo
ಮುಖಪುಟ ಓದುವುದು ಕೇಳು
Politics

ಜನೇವರಿ ೨೨ ರಿಂದ ೩೧ ವರೆಗೆ ಜಂಟಿ ಅಧಿವೇಶನ : ನರೇಗಾ ವಿಶೇಷ ಚರ್ಚೆ:ಸಿಎಂ

ಜನೇವರಿ ೨೨ ರಿಂದ ೩೧ ವರೆಗೆ ಜಂಟಿ ಅಧಿವೇಶನ : ನರೇಗಾ ವಿಶೇಷ ಚರ್ಚೆ:ಸಿಎಂ
Summary: ನರೇಗಾ ಬಗ್ಗೆ ಜನೇವರಿ ೨೨ ರಿಂದ ೩೧ರ ವರೆಗೆ ನಡೆಯಲಿರುವ ಜಂಟಿ ಅಧಿವೇಶನದಲ್ಲಿ ವಿಶೇಷ ಚರ್ಚೆಯನ್ನು ನಡೆಸುವುದಾಗಿ ಸಿಎಂ ಸಿದ್ದರಾಮಯ್ಯನವರು ತಿಳಿಸಿದ್ದಾರೆ.
BELAGAVI NEWS :

ಜಂಟಿ ಅಧಿವೇಶನ : ನರೇಗಾ ಬಗ್ಗೆ ಚರ್ಚೆ : ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜಂಟಿ ಅಧಿವೇಶನ ಜನವರಿ 22 ರಿಂದ 31ರವರೆಗೆ ನಡೆಯಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿ ಅವರು ಹೇಳಿದರು ಈ ಅಧಿವೇಶನದ ವೇಳೆ ರಾಜ್ಯಪಾಲರ ಭಾಷಣ ಮತ್ತು ನರೇಗಾ ಯೋಜನೆಯ ಬದಲಾವಣೆಯ ಬಗ್ಗೆ ವಿಶೇಷ ಚರ್ಚೆ ನಡೆಯಲಿದೆ. ಅಧಿವೇಶನದ ನಂತರ ಆಯವ್ಯಯದ ಸಿದ್ಧತೆ ಪ್ರಾರಂಭಿಸಲಾಗುವುದು" ಎಂದು ಸಿಎಂ ತಿಳಿಸಿದರು.


ವಿಬಿಜಿ ರಾಮ್ ಜಿ ಕಾಯ್ದೆ ಕುರಿತು ವಿಶೇಷ ಚರ್ಚೆ : ವಿಭಾಗ ಜಂಟಿ ಅಧಿವೇಶನದಲ್ಲಿ ವಿವಿಜಿ ರಾಮ್ ಜಿ ಕಾಯ್ದೆಯ ಸಾಮಾಜಿಕ ಆರ್ಥಿಕ ಪರಿಣಾಮಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ವಿಶೇಷ ಚರ್ಚೆ ನಡೆಯಲಿದೆ ಎಂದು ಸರಕಾರ ತಿಳಿಸಿದೆ. ಸರ್ಕಾರವು ಹೇಳುವಂತೆ ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯದ ಜನರ ಹಕ್ಕನ್ನು ಕಿತ್ತುಕೊಳ್ಳಲು ಕೇಂದ್ರ ಸರ್ಕಾರ ಮುಂದಾದರೆ ರಾಜ್ಯ ಸರ್ಕಾರ ಸುಮ್ಮನೆ ಕುಳಿತಿರಲು ಸಾಧ್ಯವಿಲ್ಲ,ಅಧಿವೇಶನದಲ್ಲಿ ಅರಿವು ಮೂಡಿಸಲು, ಜಾಗೃತಿ ಉಂಟುಮಾಡಲು ಮತ್ತು ಮನೇರೇಗಾ ಕಾಯ್ದೆಯ ಮರುಸ್ಥಾಪನೆಗಾಗಿ ಒತ್ತಡ ತರುವುದು ಎಂದು ಸ್ಪಷ್ಟಪಡಿಸಲಾಗಿದೆ. ಮುಖ್ಯಮಂತ್ರಿ ಹಾಗೂ ಸಚಿವ ಸಂಪುಟದ ನಿರ್ಧಾರದಂತೆ ನೂತನ ಕಾಯ್ದೆಯು ಸಮಾಜದ ಮೇಲೆ ಬೀರಿರುವ ಪರಿಣಾಮಗಳ ಕುರಿತು ವಿಧಾನ ಮಂಡಲದಲ್ಲಿ ಪ್ರಸ್ತಾವನೆ ಮತ್ತು ಚರ್ಚೆ ನಡೆಸಿ ಸೂಕ್ತ ನಿರ್ಣಯ ಕೈಗೊಳ್ಳುವುದು. ಈ ಮೂಲಕ ಜನರ ಮತ್ತು ರಾಜ್ಯದ ಹಿತವನ್ನು ಕಾಪಾಡಲು ಸರ್ಕಾರ ಸೂಕ್ತ ಹೆಜ್ಜೆ ಇಡಲಿದೆ.


ನವದೆಹಲಿಗೆ ಭೇಟಿ : ಡಿಕೆಶಿ ಪ್ರತಿಕ್ರಿಯೆ: ದೆಹಲಿಗೆ ಭೇಟಿಯ ಕುರಿತು ಡಿಕೆಶಿ ಮಾತನಾಡಿ ವರಿಷ್ಠರು ಕರೆ ಮಾಡಿದರೆ ದೆಹಲಿಗೆ ತೆರಳುವುದಾಗಿ ತಿಳಿಸಿದರು. ಮಾಧ್ಯಮದ ಟಿಜಿಪಿ ರಾಮಚಂದ್ರರಾವ್ ವಿರುದ್ಧದ ಕ್ರಮದ ಬಗ್ಗೆ ಪ್ರಶ್ನೆಗೆ ಉತ್ತರವಾಗಿ ಅವರು ಹೇಳಿದರು. ಬಿಜೆಪಿ ರಾಮಚಂದ್ರರಾವ್ ಅವರ ವಿರುದ್ಧ ಶಿಸ್ತಿನ ಕ್ರಮ ಜರುಗಿಸಿ ಅಮಾನತು ಮಾಡಲಾಗಿದೆ ಎಂದು ಸಿಎಂ ತಿಳಿಸಿದರು. ಕಾನೂನು ಸಂಸದೀಯ ವ್ಯವಹಾರಗಳ ಸಚಿವ ಎಚ್ ಕೆ ಪಾಟೀಲ್ ಇತ್ತೀಚಿಗೆ ಪ್ರತಿಕಾಗೋಷ್ಠಿ ನಡೆಸಿ ಜನೇವರಿ 22 ರಿಂದ 31ರವರೆಗೆ ನಡೆಯಲಿರುವ ಜಂಟಿ ಅಧಿವೇಶನಕ್ಕೆ ಮಾಹಿತಿ ನೀಡಿದ್ದಾರೆ. ರಾಜ್ಯಪಾಲರು ಮಾಡಲಿರುವ ಭಾಷಣ ಅನುಮೋದಿಸಲು ಸಚಿವ ಸಂಪುಟವು ಮುಖ್ಯಮಂತ್ರಿಗಳಿಗೆ ಅಧಿಕಾರ ನೀಡಿದೆ ಎಂದು ಅವರು ಹೇಳಿದರು.


ಮನರೇಗಾ ಹಾಗೂ ರಾಮ್ ಜಿ ಯೋಜನೆಗಳ ವೈರುಧ್ಯ : ಜಂಟಿ ಅಧಿವೇಶದಲ್ಲಿ ಮನೆರೇಗ ಹಾಗೂ ರಾಮ್ ಜಿ ಯೋಜನೆಗಳ ನಡುವಿನ ವೈರುಧ್ಯಗಳನ್ನು ತಿಳಿಸಲು ವಿಶೇಷ ಚರ್ಚೆ ನಡೆಸಲಿದೆ. ಈ ಚರ್ಚೆಗೆ ಐವರು ಮುಖ್ಯ ಸಚಿವರಿಗೆ ವಿಶೇಷ ಉಸ್ತುವಾರಿ ನೀಡಲಾಗಿದೆ ಎಂದು ಮೂಲಗಳು ತಿಳಿಸಿದ್ದಾರೆ. ಸಚಿವರಾದ ಕೃಷ್ಣ ಬೈರೇಗೌಡ, ಎಚ್ ಕೆ ಪಾಟೀಲ್, ಪ್ರಿಯಾಂಕ ಖರ್ಗೆ, ಶರಣ್ ಪಾಟೀಲ್ ಸೇರಿದಂತೆ ಐವರು ಚರ್ಚೆಯಲ್ಲಿ ಹೆಚ್ಚು ಭಾಗವಹಿಸುವಂತೆ ನಿರ್ದೇಶಿಸಲಾಗಿದೆ. ಸಿಎಂ ಸಿದ್ದರಾಮಯ್ಯನವರು ಈ ಅಧಿವೇಶನದಲ್ಲಿ ವಿಶೇಷ ವಾಗಿನರೇಗಾ ಬಗ್ಗೆ ಚರ್ಚಿಸುತ್ತೇವೆ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜಂಟಿ ಅಧಿವೇಶನ ಜನವರಿ 22 ರಿಂದ 31ರವರೆಗೆ ನಡೆಯಲಿದೆ ಎಂದು ಸಿಎಂ ಸಿದ್ದರಾಮಯ್ಯನವರು ಹೇಳಿದ್ದಾರೆ.


ಇನ್ನಷ್ಟು ಓದಿರಿ:


ಪವಿತ್ರ ಮನೆ ಊಟಕ್ಕೆ ತಡೆ : ಕಾನೂನು ಎಲ್ಲರಿಗೂ ಸಮಾನ

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online