<?= $pageTitle ?>
Logo
ಮುಖಪುಟ ಓದುವುದು ಕೇಳು
Trending

ಫ್ಲೇವರ್ಡ್ ಮಿಲ್ಕ್ ಮೇಲೆ ತೆರಿಗೆ ಕಡಿತ: ಹೈಕೋರ್ಟ್ ತೀರ್ಪು

ಫ್ಲೇವರ್ಡ್ ಮಿಲ್ಕ್ ಮೇಲೆ ತೆರಿಗೆ ಕಡಿತ: ಹೈಕೋರ್ಟ್ ತೀರ್ಪು
Summary: ದೊಡ್ಲಾ ಕಂಪನಿ ಪರ ಆದೇಶ ನೀಡಿರುವ ನ್ಯಾಯಾಲಯ, ಅದು ಪಾವತಿ ಮಾಡಿರುವ ತೆರಿಗೆ ಹಣವನ್ನು ಮರು ಪಾವತಿ ಮಾಡುವಂತೆ ನಿರ್ದೇಶನ ನೀಡಿದೆ.
BELAGAVI NEWS :

ಶ್ರೀವಿಜಯ ವಿಶಾಖ ಹಾಲು ಉತ್ಪಾದಕರ ಕಂಪನಿ ಲಿಮಿಟೆಡ್‌ ವರ್ಸಸ್‌ ಕೇಂದ್ರ ತೆರಿಗೆ ಸಹಾಯಕ ಆಯುಕ್ತರ ಪ್ರಕರಣ ಹಾಗೂ ಇನ್ನಿತರ ಪ್ರಕರಣವನ್ನು ಉಲ್ಲೇಖಿಸಿರುವ ನ್ಯಾಯಾಲಯ, ಆ ಪ್ರಕರಣಗಳಲ್ಲಿ ಆಂಧ್ರಪ್ರದೇಶ ಹೈಕೋರ್ಟ್ ಸುವಾಸನೆ ಭರಿತ ಹಾಲನ್ನು ಸುಂಕ ಶೀರ್ಷಿಕೆ 2202ರ ಅಡಿಯಲ್ಲಿ ಬರುವಂತೆ ಪರಿಗಣಿಸಲಾಗುವುದಿಲ್ಲ. ಮೇಲೆ ತಿಳಿಸಿದ ಯಾವುದೇ ನಿಬಂಧನೆಗಳ ಅಡಿಯಲ್ಲಿದಂಡದ ಪ್ರಶ್ನೆ ಉದ್ಭವಿಸುವುದಿಲ್ಲ.

ಯಾವುದೇ ಸಂದರ್ಭದಲ್ಲಿ, ಸುವಾಸನೆಯ ಹಾಲು 2202 ರೊಳಗೆ ಬಂದರೂ ಸಹ, ವ್ಯಾಪಾರಿ ತನ್ನ ಸರಕುಗಳ ವರ್ಗೀಕರಣವನ್ನು ಒಂದು ನಮೂದುಗಳಿಂದ ಇನ್ನೊಂದಕ್ಕೆ ಬದಲಾಯಿಸಿದ ಕಾರಣಕ್ಕಾಗಿ ದಂಡವನ್ನು ವಿಧಿಸಬಹುದೇ ಎಂಬ ಪ್ರಶ್ನೆಯನ್ನು ಮುಕ್ತವಾಗಿ ಬಿಡಲಾಗಿದೆ ಎಂದು ತಿಳಿಸಿದೆ.

ಶ್ರೀ ವಿಜಯ ವಿಶಾಖ ಹಾಲು ಉತ್ಪಾದಕರ ಪ್ರಕರಣದಲ್ಲಿ ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್‌ ಕೂಡ ಎತ್ತಿಹಿಡಿದಿದೆ. ಹಾಗಾಗಿ ಅರ್ಜಿಯನ್ನು ಮಾನ್ಯ ಮಾಡುತ್ತಿರುವುದಾಗಿ ಆದೇಶಿಸಿರುವ ನ್ಯಾಯಾಲಯ, ಆಕ್ಷೇಪಾರ್ಹ ಆದೇಶಗಳನ್ನು ರದ್ದುಗೊಳಿಸಿತು. ತೆರಿಗೆದಾರರು ಠೇವಣಿ ಮಾಡಿದ ಮೊತ್ತವನ್ನು ಅನ್ವಯವಾಗುವ ಬಡ್ಡಿಯೊಂದಿಗೆ ಮರು ಪಾವತಿಸುವಂತೆ ಪೀಠವು ತೆರಿಗೆ ಇಲಾಖೆಗೆ ನಿರ್ದೇಶನ ನೀಡಿತು. ತೆರಿಗೆ ಅಧಿಕಾರಿಗಳು ಹಾಲಿನ ಉತ್ಪನ್ನಗಳನ್ನು ಸುಂಕ ಶೀರ್ಷಿಕೆ 2202ರ ಅಡಿಯಲ್ಲಿ ಪಾನೀಯ ಎಂದು ವರ್ಗೀಕರಿಸಿದ್ದರು ಮತ್ತು ಡೈರಿ ಉತ್ಪನ್ನಗಳಿಗೆ ಅನ್ವಯವಾಗುವ ಶೇ.5ರ ಜಿಎಸ್‌ಟಿ ಬದಲಿಗೆ ಶೆ.12 ಮತ್ತು ಶೇ.18ಕ್ಕೂ ಅಧಿಕ ಜಿಎಸ್‌ಟಿ ತೆರಿಗೆ ದರಗಳನ್ನು ವಿಧಿಸಿದ್ದರು.

ಸಿಜಿಎಸ್‌ಟಿ ಕಾಯಿದೆಯ ಸೆಕ್ಷ ನ್‌ 74 ರಡಿಯಲ್ಲಿ ತಯಾರಕರಿಗೆ ಶೋಕಾಸ್‌ ನೋಟಿಸ್‌ ನೀಡಲಾಯಿತು. ನಂತರ ತೆರಿಗೆ ಬೇಡಿಕೆಯನ್ನು ದೃಢೀಕರಿಸುವ ಆದೇಶ ನೀಡಲಾಯಿತು. ಕಂಪನಿಯು 2021ರ ಡಿಸೆಂಬರ್‌ ನಲ್ಲಿ ಜಿಎಸ್‌ಟಿಗೆ 72.95 ಲಕ್ಷ ಠೇವಣಿ ಮಾಡಿತು ಮತ್ತು ಜಿಎಸ್​ಟಿ ಆದೇಶವನ್ನು ಪ್ರಶ್ನಿಸಿತು. ಆದರೆ ಮೊದಲ ಮೇಲ್ಮನವಿ ಪ್ರಾಧಿಕಾರವು ಅವರ ಅರ್ಜಿಯನ್ನು ವಜಾಗೊಳಿಸಿತು. ಇದನ್ನು ಪ್ರಶ್ನಿಸಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಲಾಗಿತ್ತು.

ಸ್ವಾದಭರಿತ ಹಾಲು ಡೈರಿ ಉತ್ಪನ್ನವೆಂದು ಪರಿಗಣಿಸಬೇಕೇ ಹೊರತು ಅದು ಪಾನೀಯವಲ್ಲ, ಆದ್ದರಿಂದ ಸ್ವಾದಭರಿತ ಹಾಲಿಗೆ ಶೇ.12ರಷ್ಟು ಸರಕು ಸೇವಾ ತೆರಿಗೆ(ಜಿಎಸ್‌ಟಿ) ವಿಧಿಸುವುದಕ್ಕೆ ಅವಕಾಶವಿಲ್ಲ ಎಂದು ತಿಳಿಸಿರುವ ಹೈಕೋರ್ಟ್​, ಶೇ.5ರಷ್ಟು ಮಾತ್ರ ವಿಧಿಸಬೇಕು ಎಂದು ಸೂಚಿಸಿದೆ.

ಶೇ.12ರಷ್ಟು ಜಿಎಸ್​ಟಿ ವಿಧಿಸಿದ್ದ ಕ್ರಮವನ್ನು ಪ್ರಶ್ನಿಸಿ ದೊಡ್ಲಾ ಡೈರಿ ಲಿಮಿಟೆಡ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್‌.ಆರ್‌.ಕೃಷ್ಣಕುಮಾರ್‌ ಅವರಿದ್ದ ಏಕ ಸದಸ್ಯಪೀಠ ಈ ಆದೇಶ ನೀಡಿತು. ಅಲ್ಲದೆ, ದೊಡ್ಲಾ ಕಂಪನಿ ಪರ ಆದೇಶ ನೀಡಿರುವ ನ್ಯಾಯಾಲಯ, ಅದು ಪಾವತಿ ಮಾಡಿರುವ ತೆರಿಗೆ ಹಣವನ್ನು ಮರು ಪಾವತಿ ಮಾಡುವಂತೆ ನಿರ್ದೇಶನ ನೀಡಿದೆ.

ಇನ್ನಷ್ಟು ಓದಿರಿ:
ನಾಡಗೀತೆ ಕುರಿತು ಮಹತ್ವದ ತೀರ್ಪು : ಹೈಕೋರ್ಟ್ ಗ್ರೀನ್ ಸಿಗ್ನಲ್
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online