ನಮ್ಮ ಮೋದಿಜಿ ನೇತೃತ್ವದ ಕೇಂದ್ರ ಸರ್ಕಾರ ವಿಬಿ ಜಿ ರಾಮ್ ಜಿ ಕಾಯ್ದೆ ಜಾರಿಗೆ ತಂದಿದೆ.ಈ ಹಿಂದೆ 100 ದಿನಗಳಿಂದ 125 ದಿನಗಳವರೆಗೆ ಖಾತರಿ ಉದ್ಯೋಗ ಹೆಚ್ಚಳ ಮಾಡಿ,ದಿನಗೂಲಿ ಹೆಚ್ಚಳಗೊಳಿಸಿದೆ. ಇಂದು ಬೆಳಗಾವಿ ನಗರದಲ್ಲಿ ಭಾರತೀಯ ಜನತಾ ಪಕ್ಷ ವತಿಯಿಂದ ಆಯೋಜಿಸಿದ ಕೇಂದ್ರ ಸರ್ಕಾರದ (VB-G RAM G) ವಿಕಸಿತ ಭಾರತ್- ಗ್ಯಾರಂಟಿ ಫಾರ್ ರೋಜ್ಗಾರ್ ಆ್ಯಂಡ್ ಆಜೀವಿಕಾ ಮಿಷನ್ ಗ್ರಾಮೀಣ) ಯೋಜನೆ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಲಾಯಿತು.
ಈ ಹಿಂದೆ ಮನ್ರೇಗಾ ಯೋಜನೆಯಲ್ಲಿ ಅನೇಕ ರೀತಿಯಲ್ಲಿ ದುರ್ಬಳಕೆ,ನಕಲಿ ಜಾಬ್ ಕಾರ್ಡ್,ಭ್ರಷ್ಟಾಚಾರ ತಾಂಡವ ಇತ್ತು.ಗ್ರಾಮೀಣ ಭಾಗದ ಮೂಲಸೌಕರ್ಯ ವೃದ್ಧಿಗೆ ಅದು ಸಹಕಾರಿ ಆಗಿರಲಿಲ್ಲ.ವಿಬಿ ಜಿ ರಾಮ್ ಜಿ ಯೋಜನೆಯು ಹಿಂದಿನ ನರೆಗಾಕ್ಕಿಂತ ಉತ್ತಮವಾಗಿದೆ. ಮತ್ತು ಬಡವರಿಗೆ ಸಹಕಾರಿಯಾಗಿದೆ.
ಬಡ ಜನರ ಅಭಿವೃದ್ಧಿಗಾಗಿರುವ ಯೋಜನೆಯನ್ನು ರಾಜಕೀಯಕ್ಕಾಗಿ ವಿರೋಧಿಸುತ್ತಾ,ಸುಳ್ಳು ಸುದ್ದಿ ಹಬ್ಬಿಸುವುದು.
ಹೀಗಾಗಿ ನಮ್ಮ ಮೋದಿಜಿ ನೇತೃತ್ವದ ಕೇಂದ್ರ ಸರ್ಕಾರ ವಿಬಿ ಜಿ ರಾಮ್ ಜಿ ಕಾಯ್ದೆ ಜಾರಿಗೆ ತಂದಿದೆ. ಈ ಹಿಂದೆ 100 ದಿನಗಳಿಂದ 125 ದಿನಗಳವರೆಗೆ ಖಾತರಿ ಉದ್ಯೋಗ ಹೆಚ್ಚಳ ಮಾಡಿದೆ. ದಿನಗೂಲಿ ಹೆಚ್ಚಳಗೊಳಿಸಿದೆ.
AI ಬಳಕೆ, ಡಿಜಿಟಲ್ ಎವಿಡೆನ್ಸ್ ಸೇರಿದಂತೆ ಅನೇಕ ಸುಧಾರಣೆ ಕ್ರಮ ಈ ವಿಬಿ ಜಿ ರಾಮ್ ಜಿ ಕಾಯ್ದೆಯಲ್ಲಿದೆ. ಹೀಗಾಗಿ ವಿರೋಧ ಪಕ್ಷಗಳು ಸುಖಾ ಸುಮ್ಮನೇ ವಿರೋಧ ವ್ಯಕ್ತಪಡಿಸುತ್ತಿದೆ.
ಭಾರತೀಯ ಜನತಾ ಪಾರ್ಟಿ ಬೆಳಗಾವಿ ವತಿಯಿಂದ ಪತ್ರಿಕಾಗೋಷ್ಠಿ ಆಯೋಜಿಸಲಾಗಿತ್ತು.
ಪತ್ರಿಕಾಗೋಷ್ಠಿಯಲ್ಲಿ ವಿಕಸಿತ ಭಾರತ್- ಗ್ಯಾರಂಟಿ ಫಾರ್ ರೋಜ್ಗಾರ್ ಮತ್ತು ಆಜೀವಿಕಾ ಮಿಷನ್ (ಗ್ರಾಮೀಣ) (VB-G RAM G) ಕುರಿತು ಶಾಸಕಿ ಶ್ರೀಮತಿ ಶಶಿಕಲಾ ಜೊಲ್ಲೆ ರವರು ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕರಾದ ಶ್ರೀ ಸಂಜಯ ಪಾಟೀಲ, ಶ್ರೀ ಅರವಿಂದ ಪಾಟೀಲ,ಗ್ರಾಮೀಣ ಅಧ್ಯಕ್ಷರಾದ ಶ್ರೀ ಸುಭಾಷ ಪಾಟೀಲ,ನಗರ ಅಧ್ಯಕ್ಷರಾದ ಸೌ.ಗೀತಾ ಸುತಾರ,ಶ್ರೀ ಎಂ. ಬಿ.ಜಿರಳೆ ವಕೀಲರು,ಪಕ್ಷದ ಮುಖಂಡರು ಉಪಸ್ಥಿತರಿದ್ದರು.
ಇನ್ನಷ್ಟು ಓದಿರಿ:
ಶೂರ್ಪಾಲಿ ತುಂಗಳ ರಸ್ತೆ ಹಾಳು: ಬ್ರಿಡ್ಜ್ ಬಳಿ ತೆಗ್ಗಿನಂತ ಕುಸಿತದಿಂದ ಜನರಿಗೆ ಕಷ್ಟ