ರಾಜ್ಯ ಸರ್ಕಾರದ ಶರಣಾಗತಿ ಮತ್ತು ಪುನರ್ವಸತಿ ನೀತಿಯಿಂದ ಪ್ರಭಾವಿತರಾಗಿ ಮುಖ್ಯವಾಹಿನಿಗೆ ಮರಳಲು ಮುಂದಾಗಿರುವುದಾಗಿ ಎಸ್ಪಿ ತಿಳಿಸಿದ್ದಾರೆ. ರಾಜ್ಯ ಸರ್ಕಾರದ ಶರಣಾಗತಿ ಮತ್ತು ಪುನರ್ವಸತಿ ನೀತಿಯಿಂದ ಕಾರ್ಯಕರ್ತರು ಪ್ರಭಾವಿತರಾಗಿ ಮುಖ್ಯವಾಹಿನಿಗೆ ಮರಳಲು ಮುಂದಾಗಿದ್ದಾರೆ.
ಒಟ್ಟಾರೆಯಾಗಿ 65 ಲಕ್ಷ ಬಹುಮಾನ ಹೊಂದಿದ್ದ 13 ಮಂದಿ ಸೇರಿದಂತೆ ಒಟ್ಟು 26 ನಕ್ಸಲರು ಛತ್ತೀಸ್ಗಢದ ಸುಕ್ಮಾ ಜಿಲ್ಲೆಯ ಪೊಲೀಸರ ಮುಂದೆ ಶರಣಾಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಶರಣಾದವರಲ್ಲಿ ಕಂಪನಿಯ ಪಕ್ಷದ ಸಮಿತಿ ಸದಸ್ಯ ಲಾಲಿ ಅಲಿಯಾಸ್ ಮುಚಾಕಿ ಆಯ್ತೆ ಲಖ್ಮು (35) ಅವರ ತಲೆಗೆ 10 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು. ಇವರು 2017 ರಲ್ಲಿ ಕೊರಾಪುಟ್ ರಸ್ತೆಯಲ್ಲಿ (ಒಡಿಶಾ) ವಾಹನವನ್ನು ಗುರಿಯಾಗಿಸಿಕೊಂಡು ಐಇಡಿ ಸ್ಫೋಟ ಸೇರಿದಂತೆ ಹಲವಾರು ಪ್ರಮುಖ ಹಿಂಸಾಚಾರ ಘಟನೆಗಳಲ್ಲಿ ಭಾಗಿಯಾಗಿದ್ದು, ಈ ಘಟನೆಯಲ್ಲಿ 14 ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದರು.
ಲಖ್ಮು ಹೊರತಾಗಿ ಹೆಮ್ಲಾ ಲಖ್ಮ (41), ಅಸ್ಮಿತಾ ಅಲಿಯಾಸ್ ಕಮಲು ಸನ್ನಿ (20), ರಂಬಟಿ ಆಲಿಯಾಸ್ ಪದ್ಮಾ ಜೋಗಿ (21) ಮತ್ತು ಸುಂದಮ್ ಪಾಲೆ (20) ತಲಾ 8 ಲಕ್ಷ ರೂ ಬಹುಮಾನ ಘೋಷಣೆ ಮಾಡಲಾಗಿತ್ತು. ಲಖ್ಮ 2020ರಲ್ಲಿ ಮಿಂಪಾ ಹೊಂಚುದಾಳಿ ಘಟನೆಯಲ್ಲಿ ಭಾಗಿಯಾಗಿದ್ದು, ಈ ಘಟನೆಯಲ್ಲಿ 17 ಭದ್ರತಾ ಸಿಬ್ಬಂದಿಗಳು ಸಾವನ್ನಪ್ಪಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶರಣಾದವರಲ್ಲಿ ಮೂವರು ತಲಾ 5 ಲಕ್ಷ ರೂ ಬಹುಮಾನ ಹೊಂದಿದ್ದು, ಓರ್ವ 3 ಲಕ್ಷ ರೂ ಹಾಗೂ ಮತ್ತೊರ್ವ 2 ಲಕ್ಷ ರೂ ಮತ್ತೆ ಮೂವರು ತಲಾ 1 ಲಕ್ಷರೂ ಬಹುಮಾನ ಘೋಷಿತರಾಗಿದ್ದರು.
ಶರಣಾದ ನಕ್ಸಲರಿಗೆ ಸರ್ಕಾರದ ಪುನರ್ವಸತಿ ನೀತಿಯನುಸಾರ ಎಲ್ಲಾ ಸೌಲಭ್ಯ ಹಾಗೂ 50 ಸಾವಿರ ಸಹಾಯಧನವನ್ನು ನೀಡಲಾಗುವುದು ಎಂದು ತಿಳಿಸಿದ ಎಸ್ಪಿ, ನಿಷೇಧಿತ ಮಾವೋವಾದಿ ಸಂಘಟನೆಯೊಂದಿಗೆ ಸಂಬಂಧ ಹೊಂದಿರುವ ಎಲ್ಲರೂ ಹಿಂಸಾಚಾರವನ್ನು ತ್ಯಜಿಸುವಂತೆ ಕರೆ ನೀಡಿದರು.
ಇನ್ನಷ್ಟು ಓದಿರಿ :
ಶಾಂಪೂ ಬದಲಿಸದ ಮೊದಲು ಈ ಸುಲಭ ಪರಿಹಾರ