ಮಹಾ ಮೇಧಾವಿ, ಮಹಾ ತತ್ವಜ್ಞಾನಿ ಚಾಣಕ್ಯರು ಮಾನವನ ಅಭಿವೃದ್ಧಿಗೆ ಮಾರಕವಾಗಬಲ್ಲ ಐದು ವಿಧದ ಮಿತ್ರರ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಸ್ನೇಹಕ್ಕೆ ಪವಿತ್ರವಾದ ಅರ್ಥ ಮತ್ತು ವಿಶೇಷತೆ ಇದೆ. ಸ್ನೇಹಿತರು ತಂದೆ-ತಾಯಿಗಳು ಅಥವಾ ಹೆಂಡತಿಗಿಂತಲೂ ಮಿಗಿಲಾದ ಬಲವನ್ನು ನೀಡಬಲ್ಲರು. ಆದರೆ, ಈ ಐದು ವಿಧದ ಮಿತ್ರರಿಂದ ದೂರವಿರದಿದ್ದರೆ, ನಿಮ್ಮ ಜೀವನವು ಅಧೋಗತಿಗೆ ಇಳಿಯುತ್ತದೆ ಅಥವಾ ಎಡವಟ್ಟುಗಳು ಕಾದಿವೆ ಎಂದು ಚಾಣಕ್ಯರು ಹೇಳುತ್ತಾರೆ.
ನಿಮ್ಮ ಉತ್ತಮ ಸಾಧನೆಗಳಿಗೆ, ಮಾರ್ಕ್ಸ್ ಅಥವಾ ಉದ್ಯೋಗದಲ್ಲಿನ ಯಶಸ್ಸಿಗೆ ಅಸೂಯೆ ಪಡುವವರು. ಅವರು ನಿಮ್ಮ ಮುಂದೆ ನಗುತ್ತಾ ಇದ್ದರೂ, ನಿಮ್ಮ ಹಿಂದೆ ನಿಮ್ಮನ್ನು ಅವಹೇಳನ ಮಾಡುತ್ತಾರೆ. ಇಂತಹವರ ಸಹವಾಸವು ನಿಮ್ಮ ಪ್ರಗತಿ ಮತ್ತು ಅಭಿವೃದ್ಧಿಗೆ ಮಾರಕವಾಗುತ್ತದೆ. ಸದಾ ಬೆಳೆಯಬೇಕು ಎಂದು ಹಾರೈಸುವ ಸ್ನೇಹಿತರು ಬಹಳ ಕಡಿಮೆ. ಅಸೂಯೆ ಪಡುವವರಿಂದ ದೂರವಿರಿ.
ನಿಮ್ಮನ್ನು, ನಿಮ್ಮ ವ್ಯಕ್ತಿತ್ವವನ್ನು, ನಿಮ್ಮ ಉಡುಗೆ-ತೊಡುಗೆಯನ್ನು ಅಥವಾ ನೀವು ನಡೆದುಕೊಳ್ಳುವ ರೀತಿಯನ್ನು ಇಷ್ಟಪಡದವರ ಹತ್ತಿರ ಹೋಗಲೇಬೇಡಿ. ಇವರ ಬಳಿ ಸಲಹೆ ಕೇಳಲು ಹೋದರೆ, ಅವರು ನಿಮ್ಮ ಜೀವನದ ಮೇಲೆ ದೊಡ್ಡ ಕಲ್ಲನ್ನೇ ಹಾಕುತ್ತಾರೆ, ಅಂದರೆ ನಿಮ್ಮನ್ನು ಸಂಪೂರ್ಣವಾಗಿ ಕೆಳಗೆ ತಳ್ಳುತ್ತಾರೆ. ಆದ್ದರಿಂದ, ನಿಮ್ಮನ್ನು ಇಷ್ಟಪಡದವರ ಸಹವಾಸದಿಂದ ದೂರವಿರುವುದು ಉತ್ತಮ.
“ಅತಿ ಸರ್ವತ್ರ ವರ್ಜಯೇತ್” ಎಂಬಂತೆ, ಯಾವುದೇ ವಿಷಯದಲ್ಲಿ ಅತಿ ಹೆಚ್ಚಾಗಿ ಮಾತನಾಡುವ ಮಿತ್ರರಿಂದ ಒಂದು ದಿನ ಕಂಟಕ ಎದುರಾಗಬಹುದು. ಅತಿಯಾದ ಮಾತುಕತೆಗಳು ನಿಮ್ಮ ಆತ್ಮವಿಶ್ವಾಸವನ್ನು ಕುಗ್ಗಿಸಿ, “ನಾನು ಏನೂ ಅಲ್ಲ” ಎಂಬ ಭಾವನೆ ಮೂಡಿಸಬಹುದು. ಇಂತಹವರ ಸಹವಾಸದಿಂದ ಜಾಗರೂಕರಾಗಿರಿ.
ಸುಳ್ಳು ಹೇಳುವ ಜನರೊಂದಿಗೆ ಹೆಚ್ಚು ಓಡಾಡಿದರೆ, ನಿಮ್ಮ ಜೀವನವೂ ಅಧೋಗತಿಗೆ ಇಳಿಯುತ್ತದೆ. ಸುಳ್ಳು ಸದಾ ಸತ್ಯವನ್ನು ಮುಚ್ಚಿಡಲು ಪ್ರಯತ್ನಿಸುತ್ತದೆ, ಆದರೆ ಕೊನೆಗೆ ಸತ್ಯವೇ ಗೆಲ್ಲುತ್ತದೆ. ಸುಳ್ಳು ಹೇಳುವವರ ಸಹವಾಸವು ನಿಮ್ಮ ನಂಬಿಕೆಯನ್ನು ಕಳೆದುಕೊಂಡು, ಜೀವನದಲ್ಲಿ ಕೆಟ್ಟ ಪರಿಣಾಮಗಳನ್ನು ಎದುರಿಸುವಂತೆ ಮಾಡುತ್ತದೆ.
ಚಾಣಕ್ಯರು ಹೇಳಿದಂತೆ, ಈ ಐದು ಬಗೆಯ ಜನರ ಸಹವಾಸದಿಂದ ದೂರವಿರಿ. ಇದರಿಂದ ನಿಮ್ಮ ಅಭಿವೃದ್ಧಿ ಸಾಧ್ಯವಾಗುತ್ತದೆ ಮತ್ತು ನಿಮ್ಮ ಆಯುಷ್ಯವು ವ್ಯರ್ಥವಾಗುವುದನ್ನು ತಪ್ಪಿಸಬಹುದು ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಇನ್ನಷ್ಟು ಓದಿರಿ :
ಹನುಮಂತನ ಫೋಟೋ ವಾಸ್ತು ಶಾಸ್ತ್ರ