ಸಚಿವ ಎಂ ಬಿ ಪಾಟೀಲ್ ಅವರು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರು ಇವರು ರಾಜ್ಯದಲ್ಲಿ ಹೊಸ ಹೂಡಿಕೆ ಆಕರ್ಷಣೆ ಕುರಿತು ಮಾಹಿತಿ ನೀಡಿದ್ದಾರೆ. ಜೊತೆಗೆ ಈ ಹುಡುಗಿಗಳಿಂದ ಉದ್ಯೋಗ ಸೃಷ್ಟಿ ಆರ್ಥಿಕ ಬೆಳವಣಿಗೆ ಮತ್ತು ರಾಜ್ಯದ ಕೈಗಾರಿಕಾ ಅಭಿವೃದ್ಧಿಗೆ ಪ್ರೇರಣೆ ಸಿಗಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಎಂ ಬಿ ಪಾಟೀಲ್ ರವರು ಕಳೆದ ವರ್ಷ ಫೆಬ್ರುವರಿಯ ಜಾಗೃತಿ ಮೂಡಿಕೆದಾರರ ಸಮಾವೇಶದ ನಂತರ 11 ತಿಂಗಳಲ್ಲಿ ರಾಜ್ಯವು 1.53 ಲಕ್ಷ ಕೋಟಿ ರೂ. ಹೊಸ ಹೂಡಿಕೆಯ ವಿವಿಧ ಕೈಗಾರಿಕಾ ಯೋಜನೆಗಳನ್ನು ಆಕರ್ಷಿಸಿದೆ ಎಂದು ಬೃಹತ್ ಮತ್ತು ಮಾಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ರವರು ಹೇಳಿದ್ದಾರೆ.
ರಾಜ್ಯಕ್ಕೆ ಹೊಸ ಹೂಡಿಕೆಯನ್ನು ಆಕರ್ಷಿಸುವ ಪ್ರಯತ್ನಗಳು ನಿರಂತರವಾಗಿ ಸಾಗುತ್ತಿದ್ದು, ಕೇವಲ ಹುಡುಗಿದಾರರ ಸಮಾವೇಶಕ್ಕೆ ಮಾತ್ರ ಸೀಮಿತವಲ್ಲ ಎಂದು ಅವರು ಹೇಳಿದ್ದಾರೆ. ವಿಶೇಷವಾಗಿ ತಯಾರಿಕೆ, ಮರುಬಳಕೆ ಇಂಧನ, ಡೇಟಾ ಕೇಂದ್ರಗಳು ಮತ್ತು ಜಾಗತಿಕ ಸಾಮರ್ಥ್ಯ ಕೇಂದ್ರಗಳ ಸ್ಥಾಪನೆಯ ಕ್ಷೇತ್ರಗಳಲ್ಲಿ ಹಲವು ಪ್ರಮುಖ ಉದ್ಯಮ ಸಂಸ್ಥೆಗಳು ಹೂಡಿಕೆಗೆ ಆಸಕ್ತಿ ತೋರಿದ್ದಾರೆ ಎಂದು ತಿಳಿಸಿದ್ದಾರೆ. 11 ತಿಂಗಳಲ್ಲಿ ಆಕರ್ಷಿಸಲಾದ ಹೂಡಿಕೆಗಳು ಈ ಕೆಳಗಿನಂತಿವೆ
1. ತಯಾರಿಕೆ ವಲಯ 66,293 ಕೋಟಿ ರೂ.
2. ಪವನ ಮತ್ತು ಸೌರ ವಿದ್ಯುತ್ ಉತ್ಪಾದನೆ 20,913 ಕೋಟಿ ರೂ.
3. ಜಿಸಿಸಿ ಕೇಂದ್ರಗಳ ಸ್ಥಾಪನೆ 12,500 ಕೋಟಿ ರೂ.
4. ಡೇಟಾ ಸೆಂಟರ್ಗಳ ಸ್ಥಾಪನೆ 6,350 ಕೋಟಿ ರೂ.
ಈ ಹೂಡಿಕೆಗಳನ್ನು ಸರ್ಕಾರ ಮುಂದಿನ ಹಂತದ ಪ್ರಕ್ರಿಯೆಗಳನ್ನು ತ್ವರಿತಗೊಳಿಸುವಲ್ಲಿ ತಜ್ಞತೆ ತೋರುತ್ತಿದೆ ಮತ್ತು ಕರ್ನಾಟಕದ ಉದ್ಯೋಗ ಸೃಷ್ಟಿಗೆ ಇದು ದೊಡ್ಡ ಚಾಲನೆ ನೀಡಿದೆ ಎಂದು ತಿಳಿಸಲಾಗಿದೆ.
ಕರ್ನಾಟಕದಲ್ಲಿ ಹೂಡಿಕೆ ಆಕರ್ಷಣೆ ಮುಂದುವರೆಯುತ್ತಿದ್ದು, ಹಲವು ಪ್ರಮುಖ ಕಂಪನಿಗಳು ಬೃಹತ್ ಹೂಡಿಕೆ ಯೋಜನೆಗಳನ್ನು ಘೋಷಿಸಿದ್ದಾರೆ. ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ನೀಡಿದ ಅಂಕಿ ಅಂಶಗಳು ಹೀಗಿವೆ
1. ಟೊಯೋಟೊ ಕಂಪನಿ ಜಿಗಣಿಯ ಘಟಕದಲ್ಲಿ ಗ್ಯಾಸೋಲಿನ ಮತ್ತು ಹೈಬ್ರಿಡ್ ಇಂಜಿನ್ ತಯಾರಿಕೆಗೆ 1,330 ಕೋಟಿ ರೂ. ಹೂಡಿಕೆ
2. ಎಟಿ&ಎಸ್ ಕಂಪನಿ ನಂಜನಗೂಡಿನಲ್ಲಿ ಎಲೆಕ್ಟ್ರಾನಿಕ್ ಬಿಡಿ ಭಾಗಗಳ ತಯಾರಿಕೆಗೆ 2,850 ಕೋಟಿ ರೂ ಹೂಡಿಕೆ.
3. ವಿಪ್ರೋ ಹೈಡ್ರಾಲಿಕ್ಸ್ ಎಲೆಕ್ಟ್ರಾನಿಕ್ಸ್ ಮತ್ತು ಪಿಸಿಬಿ ಕ್ಷೇತ್ರಕ್ಕೆ ಬೇಕಾದ ತಾಮ್ರದ ಲ್ಯಾಮಿನೇಟ್ ತಯಾರಿಕೆಗೆ 499 ಕೋಟಿ ರೂ. ಹೂಡಿಕೆ
4.ಝೆನ್-ಫೋಲ್ಡ್ ಬಯೋಸೈನ್ಸಸ್ ಲಿಮಿಟೆಡ್, ಔಷಧ ವಿಜ್ಞಾನ ಕ್ಷೇತ್ರಕ್ಕೆ ಬೇಕಾದ ಕಿಣ್ವಗಳ ತಯಾರಿಕೆಗೆ 490 ಕೋಟಿ ರೂ. ಹೂಡಿಕೆ
ಈ ಹೂಡಿಕೆಗಳು ರಾಜ್ಯದ ಕೈಗಾರಿಕಾ ವಲಯದ ಅಭಿವೃದ್ಧಿ ಉದ್ಯೋಗ ಸೃಷ್ಟಿ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರಮುಖ ಪ್ರಗತಿಗೆ ದಾರಿ ಮಾಡಿಕೊಡಲಿದೆ.
ಬಂಡವಾಳ ಹೂಡಿಕೆ ಮಾಡಿರುವ ಬಗ್ಗೆ ಬೃಹತ್ ಮತ್ತು ಮಾಧ್ಯಮ ಕೈಗಾರಿಕಾ ಸಚಿವರು ಎಂ ಬಿ ಪಾಟೀಲ್ ಈ ರೀತಿಯಾಗಿ ಬೆಳೆಸಿದ್ದಾರೆ ಹೂಡಿಕೆಯ ಇನ್ನಷ್ಟು ವಿವರಗಳು ಈ ಕೆಳಗಿನಂತಿವೆ
1. ಜೆಜೆಜಿ ಏರೋಸ್ಪೇಸ್ - ದೊಡ್ಡಬಳ್ಳಾಪುರದ ಆದಿ ನಾರಾಯಣ ಹೊಸಹಳ್ಳಿಯಲ್ಲಿ ವಿಮಾನ ಬಿಡಿಭಾಗಗಳ ತಯಾರಿಕೆಗೆ 470 ಕೋಟಿ ರೂ.
2. ಯಸಾಕವ - ಅದೇ ಕೈಗಾರಿಕಾ ಪ್ರದೇಶದಲ್ಲಿ ವಿದ್ಯುನ್ಮಾನ ಉತ್ಪನ್ನಗಳ ತಯಾರಿಕಾ ಘಟಕಕ್ಕೆ 330 ಕೋಟಿ ರೂ.
3. ಐನಾಕ್ಸ್ ವಿಂಡ್ - ಕೊಪ್ಪಳ ಜಿಲ್ಲೆಯ ಕುಷ್ಟಗಿಯಲ್ಲಿ ವಿಂಡ್ ಟರ್ಬೈನ್ ತಯಾರಿಕಾ ಘಟಕಕ್ಕೆ 305 ಕೋಟಿ ರೂ.
4. ಎಸ್ಎಪಿ ದೇವನಹಳ್ಳಿಯಲ್ಲಿ ತನ್ನ ಎರಡನೇ ಘಟಕ ಆರಂಭಕ್ಕೆ 1,960 ಕೋಟಿ ರೂ.
5. ಗೂಗಲ್ - ಬೆಂಗಳೂರಿನಲ್ಲಿ 2,500 ಕೋಟಿ ರೂ ಹೂಡಿಕೆ.
6. ಎನ್ಟಿಟಿ - ದೇವನಹಳ್ಳಿಯಲ್ಲಿ ಡೇಟಾ ಸೆಂಟರ್ ಸ್ಥಾಪನೆಗೆ 4,000 ಕೋಟಿ ರೂ.
7. ಡೇಟಾ ಸಮುದ್ರ- ಮಂಗಳೂರು ಹುಬ್ಬಳ್ಳಿ, ಧಾರವಾಡ ಹಾಗೂ ಮೈಸೂರಿನಲ್ಲಿ ಡೇಟಾ ಸೆಂಟರ್ ಗಳಿಗೆ 1,350 ಕೋಟಿ ರೂ
8. ಹಳದಿರಾಮ್ಸ್ ಸಮೂಹ- ತುಮಕೂರಿನ ವಸಂತ ನರಸಾಪುರದಲ್ಲಿ ಕುರುಕಲು ತಿಂಡಿ ಘಟಕ ಸ್ಥಾಪನೆಗೆ 444 ಕೋಟಿ ರೂ.
ಈ ಹೂಡಿಕೆಗಳಿಂದ ರಾಜ್ಯದಲ್ಲಿ ಉದ್ಯೋಗಾವಕಾಶ ಹೆಚ್ಚಾಗಲಿದ್ದು ತಯಾರಿಕೆ ತಂತ್ರಜ್ಞಾನ ನವೀಕರಿಸಬಹುದಾದ ಇಂಧನ ಹಾಗೂ ಆಹಾರ ಸಂಸ್ಕರಣೆ ವಲಯಗಳಲ್ಲಿ ಕರ್ನಾಟಕದ ಸ್ಥಾನ ಮತ್ತಷ್ಟು ಬಲಪಡಿಸಲಿದೆ ಎಂದು ತಿಳಿಸಬಹುದು.
ಇನ್ನಷ್ಟು ಓದಿರಿ:
'ಬಿಗ್ ಬಾಸ್ ' ಪ್ರವೇಶಕ್ಕೆ ಪ್ರೇರಣೆ : ಮಾಜಿ ಸ್ಪರ್ಧಿ ಬಿಚ್ಚಿಟ್ಟ ಸತ್ಯ