ರಾಜ್ಯಕ್ಕೆ ಸ್ವಂತ ಶಿಕ್ಷಣ ನೀತಿ ಇರುವುದರಿಂದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರಲು ಸಾಧ್ಯವಿಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಸ್ಪಷ್ಟಪಡಿಸಿದ್ದಾರೆ. ತಮಿಳುನಾಡಿನಂತೆ ಕರ್ನಾಟಕಕ್ಕು ಕೇಂದ್ರ ಸರ್ಕಾರ ಶಿಕ್ಷಣ ನಿಧಿ ಬಿಡುಗಡೆ ಮಾಡುವಲ್ಲಿ ತಾರತಮ್ಯ ತೋರಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯಗಳ ಸ್ವಾಯತ್ತತೆಗೆ ಧಕ್ಕೆಯಾಗುತ್ತಿರುವ ಹಿನ್ನೆಲೆಯಲ್ಲಿ NEP ವಿರುದ್ಧ ಕರ್ನಾಟಕವು ತಮಿಳುನಾಡಿನ ಜೊತೆಗೆ ಹೋರಾಟ ನಡೆಸಲಿದೆ ಎಂದು ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿ ವಿರೋಧಿಸಿ ತಮಿಳುನಾಡು ಸರ್ಕಾರದ ರೀತಿಯಲ್ಲೇ ಕರ್ನಾಟಕ ಹೋರಾಟ ನಡೆಸಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ರವರು ತಿಳಿಸಿದ್ದಾರೆ. ಚೆನ್ನೈಯಲ್ಲಿ ನಡೆದ ಅಂತರಾಷ್ಟ್ರೀಯ ಪುಸ್ತಕ ಮೇಳದ ನಂತರ ಮಾಧ್ಯಮಗಳಿಗೆ ಮಾತನಾಡಿದ ಮಧು ಬಂಗಾರಪ್ಪ ರವರು ತಮಿಳುನಾಡಿನಂತೆ ಕರ್ನಾಟಕವು NEPಯನ್ನು ವಿರೋಧಿಸುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಕರ್ನಾಟಕಕ್ಕೆ ತನ್ನದೇ ಆದ ವಿಶಿಷ್ಟ ಸಂಸ್ಕೃತಿ ಭಾಷೆ ಮತ್ತು ಸಂಪ್ರದಾಯ ಬಿದ್ದು ಮಾತೃಭಾಷೆಯ ಗೌರವ ನಮ್ಮ ಅಸ್ತಿತ್ವದ ಭಾಗವಾಗಿದೆ. ಯಾವುದೇ ರಾಜ್ಯದಲ್ಲಿ ಹಿಂದಿ ಹೇರಿಕೆಯನ್ನು ನಾವು ಒಪ್ಪಲಾರವು, ಈಗಾಗಲೇ ರಾಜ್ಯ ಶಿಕ್ಷಣ ನೀತಿ ಜಾರಿಯಲ್ಲಿರುವುದರಿಂದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಸ್ವೀಕರಿಸುವ ಪ್ರಶ್ನೆಯೇ ಇಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಇದಲ್ಲದೆ ತಮಿಳುನಾಡಿನಂತೆ ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ಶಿಕ್ಷಣ ನಿಧಿ ಬಿಡುಗಡೆ ಮಾಡುವಲ್ಲಿ ತಾರತಮ್ಯ ಮಾಡುತ್ತಿದೆ ಎಂದು ಆರೋಪವನ್ನು ಸಹ ಮಧು ಬಂಗಾರಪ್ಪನವರು ಮಾಡಿದ್ದಾರೆ. ಜೊತೆಗೆ ಈ ಅನ್ಯಾಯದ ವಿರುದ್ಧ ತಮಿಳುನಾಡಿನೊಂದಿಗೆ ಕರ್ನಾಟಕವು ಕೈಜೋಡಿಸಿ ಒಟ್ಟಾಗಿ ಹೋರಾಟ ನಡೆಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಕರ್ನಾಟಕದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ವಿರೋಧಿಸುವವರ ಮೇಲೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಹೇಳಿಕೆಗೆ ಪ್ರತಿಕ್ರಿಯಿಸಿ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪನವರು ಹೇಳಿದ್ದಾರೆ. ಗೊಂದಲ ಕೊಳಗಾಗಿರುವವರು ಕೇಂದ್ರ ಸಚಿವರು ಸ್ವತಹ ಅವರು ತಿಳಿದಿರುವ ಏಕೈಕ ಭಾಷೆ, ಮೋದಿ ಭಾಷೆ ಇದೇ ಸಮಸ್ಯೆ ಎಂದು ಅವರು ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ. ಮಾಧ್ಯಮಗಳಿಗೆ ಮಾತನಾಡಿದ ಮಧು ಬಂಗಾರಪ್ಪ ಕೇಂದ್ರದ ನಿಲುವು ರಾಜ್ಯಗಳ ಸಂಸ್ಕೃತಿ ಭಾಷೆ ಮತ್ತು ಸ್ವಾಯತ್ತತೆಗೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ. ರಾಷ್ಟ್ರಪಿತೃಕೇಂದ್ರೀಯ ನಿಲುವು ಮುಂದುವರೆದರೆ, ಕರ್ನಾಟಕವು ತಮಿಳುನಾಡಿನಂತೆ ಒಟ್ಟಿಗೆ NEP ವಿರೋಧವಾಗಿ ಹೋರಾಡಲಿದೆ ಎಂದು ಮಧು ಬಂಗಾರಪ್ಪನವರು ತಿಳಿಸಿದ್ದಾರೆ.
ಕರ್ನಾಟಕದಲ್ಲಿಯೂ ಅಂತರರಾಷ್ಟ್ರೀಯ ಪುಸ್ತಕ ಮೇಳ ನಡೆದಿತ್ತು ಈ ಕಾರ್ಯಕ್ರಮದಲ್ಲಿ ಮಾತನಾಡಿದಂತಹ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪನವರು ಸಾಹಿತ್ಯ ಮತ್ತು ಬರವಣಿಗೆಗೆ ಯಾವುದೇ ಮಿತಿ ಇಲ್ಲ ಎಂದು ಹೇಳಿದ್ದಾರೆ. ಚೆನ್ನೈ ಅಂತರಾಷ್ಟ್ರೀಯ ಪುಸ್ತಕ ಮೇಳದಂತೆ ಕರ್ನಾಟಕದಲ್ಲಿಯೂ ಅಂತಾರಾಷ್ಟ್ರೀಯ ಪುಸ್ತಕ ಮೇಳವನ್ನು ಪ್ರಾರಂಭಿಸಲು ಸರ್ಕಾರ ತಯಾರಾಗಿದೆ ಶೀಘ್ರದಲ್ಲೇ ಈ ಕುರಿತು ಕ್ರಮ ಕೈಗೊಳ್ಳಲಾಗುವುದು. ತಮಿಳುನಾಡಿನ ಅನುಭವಿ ಸಚಿವರು ಇದಕ್ಕಾಗಿ ಸೂಚನೆ ನೀಡಬೇಕು ಎಂದು ಅವರು ಹೇಳಿದ್ದಾರೆ. ಅವರೇ ತಿಳಿಸಿದಂತೆ ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಸುಮಾರು 5000 ಗ್ರಂಥಾಲಯಗಳನ್ನು ಸ್ಥಾಪಿಸಲಾಗಿದ್ದು, ಇದರಿಂದ ಓದುವ ಅಭ್ಯಾಸ ಬೆಳೆದಿದ್ದು ಪ್ರತಿದಿನ ಸುಮಾರು ಒಂದು ಕೋಟಿ ಶಾಲಾ ವಿದ್ಯಾರ್ಥಿಗಳು ಸಂವಿಧಾನದ ಪೀಠಿಕೆಯನ್ನು ಓದುತ್ತಿದ್ದಾರೆ. ಕರ್ನಾಟಕವು ದ್ವಿ ಭಾಷಾ ಶಿಕ್ಷಣವನ್ನು ಅನುಸರಿಸುತ್ತಿದ್ದು, ಪಠ್ಯಕ್ರಮದಲ್ಲಿ ತಮಿಳು, ಮಲಯಾಳಂ,ಮರಾಠಿ ಸೇರಿದಂತೆ ಹಲವು ಭಾಷೆಗಳನ್ನೊಳಗೊಂಡಿದೆ.
ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಡಿಎಂಕೆ ಸಂಸದೀಯ ಪಕ್ಷದ ನಾಯಕಿ ಕನಿಮೋಳಿ ಕರುಣಾನಿಧಿ ಹೇಳಿದ್ದು, ಪುಸ್ತಕಗಳ ಮೂಲಕ ವ್ಯಕ್ತಿಯ ಪ್ರಪಂಚ ಮತ್ತು ಜೀವನವನ್ನು ತಿಳಿಯಬಹುದು. ಸಾಹಿತ್ಯವು ಧರ್ಮ ಮತ್ತು ಜನಾಂಗೀಯತೆಯ ನಡುವಿನ ಅಡೆತಡೆಗಳನ್ನು ಹೊಡೆಯುತ್ತದೆ. ಪುಸ್ತಕ ಮೇಳವು ಪ್ರಪಂಚದ ಜೀವನ ಹೋರಾಟ ಮತ್ತು ಗೌರವ ಗುರುತನ್ನು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ. ಚೆನ್ನಯ ಅಂತರಾಷ್ಟ್ರೀಯ ಪುಸ್ತಕ ಮೇಳ 2026 ಶಾಲಾ ಮತ್ತು ಪ್ರೌಢ ಶಿಕ್ಷಣ ಸಚಿವ ಅನ್ಬಿಲ್ ಮಹೇಶ್ ಪೊಯ್ಯಮೋಶಿ ತಿಳಿಸಿದ್ದಾರೆ, ಜೊತೆಗೆ ಈ ವರ್ಷದ 2026 ಚೆನ್ನೈ ಪುಸ್ತಕ ಮೇಳದಲ್ಲಿ ಫ್ರಾಂಕ್ ಫರ್ಟ್ ವಿಶೇಷ ಆಹ್ವಾನಿತ ಭಾಗವಹಿಸುವುದು ನಿರ್ವಹಣಾ ಸಮಿತಿಗೆ ದೊಡ್ಡ ಗೌರವವಾಗಿದೆ. ಈ ಮೂಲಕ ಪ್ರಪಂಚಾದ್ಯಂತ ಪ್ರಕಾಶಕರು ಮತ್ತು ಬರಹಗಾರರು ಚೆನ್ನೈ ಪುಸ್ತಕ ಮೇಳಗಳ ಮೇಲೆ ಗಮನಹೊಂದಿದ್ದಾರೆ. ಮತ್ತು ಮೇಳವು ಮುಂದಿನ ಹಂತಕ್ಕೆ ಹೆಜ್ಜೆ ಇಡಲಿದೆ ಎಂದು ಅವರು ತಿಳಿಸಿದ್ದಾರೆ.
ಈ ಅಂತರಾಷ್ಟ್ರೀಯ ಪುಸ್ತಕ ಮೇಳದಲ್ಲಿ ತಮಿಳುನಾಡು, ಕೇರಳ,ದೆಹಲಿ,ಗುಜರಾತ್, ಕರ್ನಾಟಕ,ಮಹಾರಾಷ್ಟ್ರ ರಾಜಸ್ಥಾನ,ಪಶ್ಚಿಮಬಂಗಾಳ ಮತ್ತು ತೆಲಂಗಾಣ ಸೇರಿದಂತೆ ಎಂಟು ರಾಜ್ಯಗಳಿಂದ 42 ಪ್ರಕಾಶಕರು ಭಾಗವಹಿಸುತ್ತಿದ್ದಾರೆ. ಈ ಪುಸ್ತಕ ಮೇಳವು ಮೂರು ದಿನಗಳ ಕಾಲ ನಡೆಯುವುದು ಎಂದು ತಿಳಿಸಲಾಗಿದೆ.
ಇನ್ನಷ್ಟು ಓದಿರಿ:
೭೭ ನೇ ಗಣರಾಜ್ಯೋತ್ಸವ : "ವಂದೇ ಮಾತರಂ" ೧೫೦ ವರ್ಷ ಆಚರಣೆ