<?= $pageTitle ?>
Logo
ಮುಖಪುಟ ಓದುವುದು ಕೇಳು
Trending

9 ವರ್ಷದ ಬಾಲಕಿ 45೦ ಕಿಮೀ ಸ್ಕೇಟಿಂಗ್​ ಮಾಡಿ ಅಯೋಧ್ಯೆಗೆ ತಲುಪಿದ ; ವಂಶಿಕಾ ಯಾದವ್

9 ವರ್ಷದ ಬಾಲಕಿ 45೦ ಕಿಮೀ ಸ್ಕೇಟಿಂಗ್​ ಮಾಡಿ ಅಯೋಧ್ಯೆಗೆ ತಲುಪಿದ ; ವಂಶಿಕಾ ಯಾದವ್
Summary: ಭಕ್ತಿಯಿಂದ ಪ್ರೇರಿತಳಾದ ಬಾಲಕಿ ಉತ್ತರ ಪ್ರದೇಶವು ಶೀತಗಾಳಿಯಲ್ಲಿ ನಡುಗುತ್ತಿದೆ. ಆದರೆ ರಾಮಲಲ್ಲಾನ ಆಶೀರ್ವಾದ ಪಡೆಯಲು ಶಿಕೋಹಾಬಾದ್‌ನಿಂದ ಅಯೋಧ್ಯೆಗೆ ಒಂಬತ್ತು ವರ್ಷದ ವಂಶಿಕಾ ಯಾದವ್ ಮೈನಡುಗುವ ಚಳಿಯನ್ನೂ ಲೆಕ್ಕಿಸದೇ ಆರು ದಿನಗಳ ಕಾಲ ರಸ್ತೆಗಳಲ್ಲಿ ಸ್ಕೇಟಿಂಗ್ ಮಾಡಿಕೊಂಡು ತಲುಪಿದ್ದಾಳೆ
belagavi news:

ಫಿರೋಜಾಬಾದ್ ಜಿಲ್ಲೆಯ ಶಿಕೋಹಾಬಾದ್‌ಗೆ ಸೇರಿದ ವಂಶಿಕಾ, ಅಯೋಧ್ಯೆಯನ್ನು ತಲುಪಲು ಮತ್ತು ಭವ್ಯವಾದ ರಾಮ ಮಂದಿರದಲ್ಲಿರುವ ರಾಮಲಲ್ಲಾನ ಆಶೀರ್ವಾದವನ್ನು ಪಡೆಯಲು ಸುಮಾರು 450 ಕಿಲೋಮೀಟರ್ ಸ್ಕೇಟಿಂಗ್ ಮಾಡಿ ಸೈ ಎನಿಸಿಕೊಂಡಿದ್ದಾಳೆ.

ಪುಟ್ಟ ಬಾಲಕಿಯ ಅಸಾಧಾರಣ ಪ್ರಯಾಣವು ರಾಜ್ಯಾದ್ಯಂತ ಜನರನ್ನು ಬೆರಗುಗೊಳಿಸಿದೆ. ಆದರೆ, ಬಾಲಕಿ ಮಾತ್ರ ಇದು ನನ್ನ ಧ್ಯೇಯವಾಗಿತ್ತು ಎನ್ನುತ್ತಿದ್ದಾಳೆ. ನನಗೆ ನಂಬಿಕೆ ಮತ್ತು ದೃಢಸಂಕಲ್ಪ ಮಾಡಿ ಈ ಸ್ಕೇಟಿಂಗ್ ಪೂರ್ಣಗೊಳಿಸಿ ರಾಮಲ್ಲಲ್ಲಾನ ಆಶೀರ್ವಾದ ಪಡೆದಿದ್ದೇನೆ ಎನ್ನುತ್ತಿದ್ದಾರೆ.

ರಾಮ ದೇವಾಲಯದ ಟ್ರಸ್ಟಿ ಡಾ. ಅನಿಲ್ ಮಿಶ್ರಾ ಮಾತನಾಡಿ, ವಂಶಿಕಾ ಅವರ ದೃಢಸಂಕಲ್ಪವನ್ನು ಶ್ಲಾಘಿಸಿದರು. ಭಗವಾನ್ ರಾಮನು ಸ್ವತಃ ಅವರ ಭಕ್ತಿಗೆ ಸಾಕ್ಷಿಯಾಗಿದ್ದಾನೆ. ಈ ಚಳಿಯಲ್ಲಿ ಅವರು 450 ಕಿಲೋಮೀಟರ್ ಸ್ಕೇಟಿಂಗ್ ಮಾಡಿ ಇಲ್ಲಿಗೆ ಬಂದ ರೀತಿ. ಬಲವಾದ ದೃಢಸಂಕಲ್ಪವು ಯಾವುದೇ ಸವಾಲನ್ನು ಜಯಿಸಲು ಸಹಾಯ ಮಾಡುತ್ತದೆ ಎಂದು ದೇಶದ ಯುವಕರಿಗೆ ವಂಶಿಕಾ ತೋರಿಸಿಕೊಟ್ಟಿದ್ದಾರೆ ಎಂದು ಅವರು ಹೇಳಿದರು.

ಅಯೋಧ್ಯಾ, ಉತ್ತರಪ್ರದೇಶ: ಉತ್ತರ ಪ್ರದೇಶವು ಶೀತಗಾಳಿಯಲ್ಲಿ ನಡುಗುತ್ತಿದೆ. ಇನ್ನು ಬಹುತೇಕರು ಕಂಬಳಿ ಹೊದ್ದುಕೊಂಡು ಮನೆಯೊಳಗೆ ಇರಲು ಬಯಸುತ್ತಿದ್ದಾರೆ. ಆದರೆ, ಒಂಬತ್ತು ವರ್ಷದ ವಂಶಿಕಾ ಯಾದವ್ ಮೈನಡುಗುವ ಚಳಿಯನ್ನೂ ಲೆಕ್ಕಿಸದೇ ಆರು ದಿನಗಳ ಕಾಲ ರಸ್ತೆಗಳಲ್ಲಿ ಸ್ಕೇಟಿಂಗ್ ಮಾಡಿಕೊಂಡು ರಾಮಲಲ್ಲಾನ ಭಕ್ತಿಯಲ್ಲಿ ವಿಲೀನಳಾಗಿ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ.'

ಸ್ಕೇಟಿಂಗ್​ ಮೂಲಕ ಅಯೋಧ್ಯೆ ತಲುಪಿದ ತಕ್ಷಣ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್​ ನ ವಂಶಿಕಾ ಅವರನ್ನು ಸ್ವಾಗತಿಸಿತು. ಬಳಿಕ ಬಾಲಕಿ ರಾಮಲಲ್ಲಾ ದರ್ಶನ ಪಡೆಯಲು ತೆರಳಿ ರಾಮ ದರ್ಬಾರ್‌ನಲ್ಲಿ ಪ್ರಾರ್ಥನೆ ಸಲ್ಲಿಸಿದರು. ಬಾಲಕಿಯ ದೃಢಸಂಕಲ್ಪ ಮತ್ತು ದೃಢನಿಶ್ಚಯ ನೋಡಿ ಇತರ ಭಕ್ತರು ಅವರನ್ನು ಶ್ಲಾಘಿಸಿದರು.

ಜನವರಿ 3 ರಂದು ವಂಶಿಕಾ ತನ್ನ ಪ್ರಯಾಣವನ್ನು ಪ್ರಾರಂಭಿಸಿದಳು. ಹೆದ್ದಾರಿಗಳು, ಬೀದಿಗಳು ಮತ್ತು ಕಿರಿದಾದ ಹಾದಿಗಳ ಮೂಲಕ ಸ್ಕೇಟಿಂಗ್ ಮಾಡಿ, ಅಂತಿಮವಾಗಿ ಶುಕ್ರವಾರ ಅಯೋಧ್ಯೆಯನ್ನು ತಲುಪಿದಳು. ಕಠಿಣ ಹವಾಮಾನ ಮತ್ತು ದೂರದ ಹೊರತಾಗಿಯೂ ಅವರು ಯಾವುದೇ ಗೊಂದಲವಿಲ್ಲದೇ ತಮ್ಮ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾಳೆ.

ಇಂತಹ ಕಠಿಣ ಪ್ರತಿಜ್ಞೆಯನ್ನು ಪೂರೈಸುವಲ್ಲಿ ಬೆಂಬಲ ನೀಡಿದ ಆಕೆಯ ಪೋಷಕರನ್ನು ಇದೇ ವೇಳೆ ಅಭಿನಂದಿಸಲಾಯಿತು. ಹೆಚ್ಚಿನ ಮಕ್ಕಳು ಆಧ್ಯಾತ್ಮಿಕತೆಯಿಂದ ದೂರ ಸರಿಯುತ್ತಿರುವ ಈ ವಯಸ್ಸಿನಲ್ಲಿ ವಂಶಿಕಾಳ ಹಾದಿ ಖಂಡಿತವಾಗಿಯೂ ಒಂದು ಮಾದರಿ ಕೆಲಸವಾಗಿದೆ.

ಸ್ಕೇಟಿಂಗ್​ ಮೂಲಕ ಅಯೋಧ್ಯೆ ತಲುಪಿದ ತಕ್ಷಣ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್​ ನ ವಂಶಿಕಾ ಅವರನ್ನು ಸ್ವಾಗತಿಸಿತು. ಬಳಿಕ ಬಾಲಕಿ ರಾಮಲಲ್ಲಾ ದರ್ಶನ ಪಡೆಯಲು ತೆರಳಿ ರಾಮ ದರ್ಬಾರ್‌ನಲ್ಲಿ ಪ್ರಾರ್ಥನೆ ಸಲ್ಲಿಸಿದರು. ಬಾಲಕಿಯ ದೃಢಸಂಕಲ್ಪ ಮತ್ತು ದೃಢನಿಶ್ಚಯ ನೋಡಿ ಇತರ ಭಕ್ತರು ಅವರನ್ನು ಶ್ಲಾಘಿಸಿದರು.

ಇನ್ನಷ್ಟು ಓದಿರಿ:
ಮಾಜಿ ಶಾಸಕರ ಶಹಜಾನ್ ಡೊಂಗರಗಾಂವ 70 ವರ್ಷ ಪೂರ್ತಿ : ವಿಶಿಷ್ಟ ಆಚರಣೆ
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online