ನಳಂದ (ಬಿಹಾರ): ಪ್ರಾಧ್ಯಾಪಕ ಹುದ್ದೆಯನ್ನು ತೊರೆದು ಮೀನುಗಾರಿಕೆ ಕೃಷಿ ಮಾಡಿ ಯಶಸ್ವಿಯಾದ ಸ್ಪೂರ್ತಿದಾಯಕ ಯಶೋಗಾಥೆ ಇದು. ಇವರ ಹೆಸರು ಕವಿಂದ್ರ ಕುಮಾರ್ ಮೌರ್ಯ. ಸದ್ಯ ಇಲ್ಲಿ ಮೀನು ವ್ಯಾಪಾರಿ ಎಂತಲೇ ಹೆಸರುವಾಸಿಯಾಗಿದ್ದಾರೆ.
ಪ್ರಾಧ್ಯಾಪಕರಿಂದ ಮೀನು ಕೃಷಿಯತ್ತ: ನುರ್ಸರೈ ಬ್ಲಾಕ್ನ ಚಾರುಯಿಪರ್ ಗ್ರಾಮದ ನಿವಾಸಿ ಕವಿಂದ್ರ ಕುಮಾರ್ ಮೌರ್ಯ ಕುಶ್ವಾಹ ಅವರು ಸೋಮರಿ ತ್ರಿಲೋಕಿ ಕಾಲೇಜಿನಲ್ಲಿ (ಕೆಎಸ್ಟಿ) ಪ್ರಾಧ್ಯಾಪಕರಾಗಿದ್ದರು. ಆದಾಗ್ಯೂ, ಅವರು ಮೊದಲಿನಿಂದಲೂ ವಿಭಿನ್ನವಾಗಿ ಏನನ್ನಾದರೂ ಮಾಡಲು ಬಯಸಿದ್ದರು. ಅಲ್ಲದೇ, ಅವರು ಕೃಷಿಯಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರು. ಆದ್ದರಿಂದ, ಅವರು ತಮ್ಮ ಬೋಧನಾ ಕೆಲಸವನ್ನು ಬಿಟ್ಟು ಸಾಂಪ್ರದಾಯಿಕ ಕೃಷಿಯತ್ತ ಹೊರಳಿದರು.
ಅವಕಾಶವಾಗಿ ಬದಲಾದ ವಿಪತ್ತು : ಈ ಕುರಿತು ಈಟಿವಿ ಭಾರತ್ ಜೊತೆ ಮಾತನಾಡಿದ ಕವೀಂದ್ರ ಕುಮಾರ್ ಅವರು, 'ನಾನು ತರಕಾರಿಗಳನ್ನು ಬೆಳೆಯುತ್ತಿದ್ದೆ, ಕೆಲವೊಮ್ಮೆ ಲಾಭ ಗಳಿಸುತ್ತಿದ್ದೆ, ಕೆಲವೊಮ್ಮೆ ನಷ್ಟ ಅನುಭವಿಸುತ್ತಿದ್ದೆ' ಎಂದು ವಿವರಿಸಿದ್ದಾರೆ.
ಆಂಧ್ರಪ್ರದೇಶದಲ್ಲಿ ತರಬೇತಿ : ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಆಗಿನ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಅವರ ಉಪಕ್ರಮದ ಮೇರೆಗೆ, ಕವೀಂದ್ರ ಸೇರಿದಂತೆ 40 ರೈತರ ಗುಂಪನ್ನು ತರಬೇತಿಗಾಗಿ ಆಂಧ್ರಪ್ರದೇಶಕ್ಕೆ ಕಳುಹಿಸಲಾಯಿತು. ಅಲ್ಲಿಂದ ಹಿಂದಿರುಗಿದ ನಂತರ ಅವರು ಎಂದಿಗೂ ಹಿಂತಿರುಗಿ ನೋಡಲಿಲ್ಲ. ಪಂತ್ನಗರದ ಮೀನುಗಾರಿಕೆ ಪದವೀಧರರಾದ ಆರ್. ಕೆ. ಸಿನ್ಹಾ ಕೂಡ ಇವರಿಗೆ ಗಮನಾರ್ಹ ಸಹಾಯವನ್ನು ನೀಡಿದ್ದಾರೆ.
ಕೊಳದ ಸುತ್ತಲೂ ಸೌರ ಬೇಲಿ : ಹೆಚ್ಚುತ್ತಿರುವ ನೀಲ್ಗೈ ಮತ್ತು ಕಳ್ಳತನದ ಘಟನೆಗಳನ್ನು ತಡೆಯುವುದಕ್ಕಾಗಿ ಅವರು ತಂತ್ರಜ್ಞಾನವನ್ನು ಆಶ್ರಯಿಸಿದ್ದಾರೆ. ಕೊಳದ ಸುತ್ತಲೂ ಸೌರ ಬೇಲಿಯನ್ನು ಅಳವಡಿಸಿದ್ದಾರೆ. ಇದು ಕಡಿಮೆ ಪ್ರಮಾಣದ ವಿದ್ಯುತ್ನ್ನು ಒದಗಿಸುತ್ತದೆ. ಇದು ನೀಲ್ಗೈ ಮತ್ತು ಹಂದಿಗಳು ಜಮೀನಿಗೆ ಪ್ರವೇಶಿಸುವುದನ್ನು ತಡೆಯುತ್ತದೆ. ಇದರಿಂದಾಗಿ ಯಾವುದೇ ಕಳ್ಳರು ಕೊಳದ ಬಳಿಗೆ ಪ್ರವೇಶಿಸಲು ಧೈರ್ಯ ಮಾಡುವುದಿಲ್ಲ. ಇದು ಅವರಿಗೆ ತಮ್ಮ ವ್ಯವಹಾರವನ್ನು ವಿಶ್ವಾಸದಿಂದ ಮುಂದುವರಿಸಲು ಅವಕಾಶ ಮಾಡಿಕೊಟ್ಟಿದೆ.
ಲಕ್ಷಗಟ್ಟಲೆ ಸಂಪಾದನೆ : ಕವೀಂದ್ರ ಅವರು ತರಕಾರಿ ಕೃಷಿ ಮಾಡುವಾಗ ಹವಾಮಾನದ ಹೊಡೆತವನ್ನು ಎದುರಿಸಿದರು. ಇದರಿಂದಾಗಿ ಅವರ ಆಲೂಗಡ್ಡೆ, ಟೊಮೆಟೊ ಮತ್ತು ಈರುಳ್ಳಿ ಬೆಳೆಗಳು ಹಾನಿಗೊಳಗಾದವು. ನಂತರ ಅವರು ಸಾಂಪ್ರದಾಯಿಕ ಕೃಷಿಯನ್ನು ತ್ಯಜಿಸಿ ಮೀನು ಸಾಕಣೆಯತ್ತ ಮುಖ ಮಾಡಿದರು. ಇಂದು, ಅವರು 4 ಎಕರೆಯಲ್ಲಿ ಮೀನು ಸಾಕಣೆ ಮಾಡುವ ಮೂಲಕ ಒಂದು ಋತುವಿಗೆ 5 ಲಕ್ಷ ರೂಪಾಯಿಗಳವರೆಗೂ ಹಣ ಗಳಿಸುತ್ತಿದ್ದಾರೆ. ಯುವಕರು ಈ ವ್ಯವಹಾರಕ್ಕೆ ತಮ್ಮ ಸಮಯ ಮತ್ತು ಸಮರ್ಪಣೆಯನ್ನು ಮೀಸಲಿಟ್ಟರೆ, ಅವರು ವಾರ್ಷಿಕವಾಗಿ 15 ಲಕ್ಷ ರೂಪಾಯಿಗಳವರೆಗೆ ಗಳಿಸಬಹುದು ಅಂತಾರೆ ಕವೀಂದ್ರ.
ಪ್ರಾಧ್ಯಾಪಕರಿಂದ ಮೀನು ಸಾಕಣೆವರೆಗೆ : ರೈತ ಕವೀಂದ್ರ ಕುಮಾರ್ ಸಸ್ಯಶಾಸ್ತ್ರದಲ್ಲಿ ಎಂ.ಎಸ್ಸಿ ಪದವಿ ಪಡೆದಿದ್ದಾರೆ. ಅಲ್ಲದೇ, ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಬೋಧಿಸಿದ್ದಾರೆ. ಅವರ ಕಠಿಣ ಪರಿಶ್ರಮದ ಪರಿಣಾಮವಾಗಿ ಇಂದು ಅವರ ಮಕ್ಕಳು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಅವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಇಬ್ಬರೂ ಇಂಜಿನಿಯರ್ಗಳು. ಹಿರಿಯ ಮಗ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದ ನಂತರ ಗೃಹ ಸಚಿವಾಲಯದಲ್ಲಿ ಸೇವೆ ಸಲ್ಲಿಸುತ್ತಿದ್ದರೆ, ಕಿರಿಯ ಮಗ ಸಿವಿಲ್ ಇಂಜಿನಿಯರಿಂಗ್ ಮುಗಿಸಿದ ನಂತರ ಇನ್ಫೋಸಿಸ್ನಂತಹ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕವೀಂದ್ರ ಅವರು ಆರಂಭದಲ್ಲಿ ತಮ್ಮ ಕೆಲಸದ ಹೊರೆ ಕಡಿಮೆ ಮಾಡಲು ಬಯಸಿದ್ದರು. ಆದ್ದರಿಂದ, ತಮ್ಮ ಬೋಧನೆಯ ಹುದ್ದೆಯನ್ನೇ ತೊರೆದಿದ್ದಾರೆ.
ಸಾಮಾನ್ಯ ವಿಧಾನಗಳನ್ನು ಬಳಸಿಕೊಂಡು ಮೀನು ಸಾಕಣೆ : ಕವೀಂದ್ರ ಅವರು ಸಾಮಾನ್ಯ ವಿಧಾನಗಳನ್ನು ಬಳಸಿಕೊಂಡು ಮೀನು ಸಾಕಣೆ ಮಾಡುತ್ತಿದ್ದಾರೆ. ಅವರು ಒಂದು ಹೊಲದಲ್ಲಿ 7 ರಿಂದ 9 ಅಡಿ ಆಳದ ಗುಂಡಿಯನ್ನು ತೆಗೆಯುತ್ತಾರೆ. ಅಲ್ಲಿ ಸುಮಾರು 5 ಅಡಿಯವರೆಗೆ ನೀರು ಬಂದು ನಿಲ್ಲುತ್ತದೆ. ಕೊಳವನ್ನು ಸ್ವಚ್ಛವಾಗಿಡಲು, ಸುಣ್ಣ ಮತ್ತು ನಾರಗಸೆಯ ಕೇಕ್ ದ್ರಾವಣವನ್ನು ತಯಾರಿಸಲಾಗುತ್ತದೆ. ನಿಯಮಿತವಾಗಿ ವರ್ಷಕ್ಕೆ ಎರಡು ಬಾರಿ ಕೊಳಕ್ಕೆ ಸುರಿಯಲಾಗುತ್ತದೆ.
ಇನ್ನಷ್ಟು ಓದಿರಿ:
ವೈಬ್ರಂಟ್ ಗುಜರಾತ್ ಪ್ರಾದೇಶಿಕ ಸಮ್ಮೇಳನ ಉದ್ಘಾಟನೆ : ಪ್ರಧಾನಿ ಮೋದಿ