19 articles found
ಕೇಂದ್ರ ಬಜೆಟ್ 2026ರಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ದೇಶದ 7 ಪ್ರಮುಖ ಹೈ ಸ್ಪೀಡ್ ರೈಲು ಮಾರ್ಗಗಳಲ್ಲಿ ಕಾರಿಡಾರ್ ಘೋಷಿಸಿದರು. ಬೆಂಗಳೂರಿಗೆ ವಿಶೇಷ ಒತ್ತು ನೀಡಲಾದ, ಈ ಯೋಜನೆ ಟ್ರಾನ್ಸ್ಪೋರ್ಟ್ ವೇಗ ಬಂಡವಾಳ ಹೂಡಿಕೆ ಮತ್ತು ಮೂಲ ಸೌಕರ್ಯ ಅಭಿವೃದ್ಧಿಗೆ ಚಾಲನೆ ನೀಡಲಿದೆ.
RCB WPL 2026 ಫೈನಲ್ ಗೆ ಪ್ರವೇಶ: ರಾಯಲ್ ಚಾಲೆಂಜ್ ಬೆಂಗಳೂರು ತಂಡವು ಯುಪಿ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ೮ ವಿಕೆಟ್ ಗಳಿಂದ ಜಯ ಸಾಧಿಸಿ WPL 2026 ಫೈನಲ್ ಪ್ರವೇಶಿಸಿದೆ. ಈ ಗೆಲುವಿನಿಂದ ಆರ್ ಸಿ ಬಿ ಅಭಿಮಾನಿಗಳು ಖುಷಿಯಿಂದ ಉತ್ಕಂಠೆಗೊಳ್ಳುತ್ತಿದ್ದಾರೆ.
ಆರ್ಸಿಬಿ ಫ್ರಾಂಚೈಸಿ ಬೆಂಗಳೂರು ನಗರದಲ್ಲಿ ತಮ್ಮ ಐಪಿಎಲ್ ಪಂದ್ಯವನ್ನು ಆಯೋಜಿಸಲು ರಾಜ್ಯ ಸರ್ಕಾರದೊಂದಿಗೆ ಚರ್ಚೆ ನಡೆಸಲು ನಿರ್ಧರಿಸಿದೆ. ಅಂತಿಮ ನಿರ್ಧಾರವು ಇಂದು ಅಥವಾ ನಾಳೆ ಪ್ರಕಟವಾಗಲಿದೆ.
ಮಾರ್ಚನಲ್ಲಿ ಐಪಿಎಲ್ ಪಂದ್ಯಗಳು ಆರಂಭವಾಗಿತ್ತುರುವದರಿಂದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅಲ್ಪಾವದಿ ಷರತ್ತುಗಳನ್ನು ಪೂರೈಸಬೇಕು ಎಂದು ಗೃಹ ಸಚಿವ ಜಿ. ಪಂಪರಮೇಶ್ವರರವರು ಮಾಧ್ಯಮಗಳಿಗೆ ಹೇಳಿಕೆಯನ್ನು ನೀಡಿದ್ದಾರೆ.
ಬೆಂಗಳೂರು ಹಬ್ಬ - ೨೦೨೬ ಕಾರ್ಯಕ್ರಮವನ್ನು ವಿಧಾನಸಭೆಯಲ್ಲಿ ಆಯೋಜಿಸಲಾಗಿತ್ತು ಮತ್ತು ಸಿದ್ದರಾಮಯ್ಯನವರು ಉದ್ಘಾಟಿಸಿದರು. ಯಾವುದೇ ರಾಜ್ಯದಿಂದ ಬಂದರು ಕನ್ನಡ ಕಲಿತು ಕನ್ನಡಿಗರಾಗಿ ಬದುಕಬೇಕು ಎಂದು ಸಿಎಂ ಹೇಳಿದರು.
ವಾಯುಭಾರ ಕುಸಿತದ ಪ್ರಭಾವದಿಂದ ಬೆಂಗಳೂರು , ಕರಾವಳಿ ಜಿಲ್ಲೆಗಳು ಸೇರಿದಂತೆ ರಾಜ್ಯದ ವಿವಿಧ ಕಡೆಗಳಲ್ಲಿ ಇಂದು ಮಳೆಯಾಗುದಾಗಿ ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ.
ಬೆಂಗಳೂರು - ವಿಜಯವಾಡ ಆರು ಲೇನ್ಗಳ ರಾಷ್ಟ್ರೀಯ ಹೆದ್ದಾರಿಯನ್ನು ವೇಗವಾಗಿ ನಿರ್ಮಿಸುವ ಮೂಲಕ ಗಿನ್ನೆಸ್ ವಿಶ್ವದಾಖಲೆ ಬರೆದಿರುವುದು ಇಡೀ ರಾಷ್ಟ್ರಕ್ಕೆ ಹೆಮ್ಮೆ . ಈ ಸಾಧನೆಗೆ ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು & ಕೇಂದ್ರ ರಸ್ತೆ & ಹೆದ್ದಾರಿ ವ್ಯವಹಾರಗಳ ಸಚಿವ ನಿತಿನ್ ಗಡ್ಕರಿ ಅವರ ನೇತೃತ್ವದಲ್ಲಿ ಈ ಮೈಲಿಗಲ್ಲು ಸಾಧಿಸಿರುವುದು ಹೆಮ್ಮೆಯ ವಿಷಯ.
ಬಿಡಿಎ ಎಂದರೆ ವ್ಯಾಪಾರ, ಬ್ರೋಕರೇಜ್ ಎಂಬ ಕಳಂಕ ತೆಗೆದುಹಾಕಿ, ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಿ ಬಿಡಿಎ (ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ) ಕುರಿತಾಗಿ ವ್ಯಾಪಾರ ಮತ್ತು ಬ್ರೋಕರೇಜ್ ಎಂಬ ಕಳಂಕ ಹೋಗಬೇಕು ಎಂದು ಡಿಕೆ ಶಿವಕುಮಾರ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಅಜೀಂ ಪ್ರೇಮ್ ಜಿ ಫೌಂಡೇಶನ್ಗೆ ಬೆಂಗಳೂರಿನಲ್ಲಿ ಅಂಗಾಂಗ ಕಸ ಚಿಕಿತ್ಸೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲು Karnataka Cabinet ಅನುಮತಿ ನೀಡಿದೆ.
ದಕ್ಷಿಣ ಕನ್ನಡ ಜನರಿಗೆ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ! ಏನಪ್ಪ ಸಿಹಿ ಸುದ್ದಿ ಅದು ನೋಡೋಣ ಬನ್ನಿ.. ವಂದೇ ಭಾರತ್ ರೈಲು ಇನ್ಮುಂದೆ ಬೆಂಗಳೂರಿನಿಂದ ಮಂಗಳೂರಿಗೆ ಕೇವಲ ೫ ಗಂಟೆಯಲ್ಲಿ ತಲುಪಬಹುದಂತೆ ಇದು ನಿಜವೇ.. ಹೌದು ನಿಜ ಬೆಂಗಳೂರಿನಿಂದ ಮಂಗಳೂರಿಗೆ ಪ್ರಯಾಣಿಸುವ ಸಮಯವನ್ನು ಕಡಿಮೆ ಮಾಡುತ್ತಿದ್ದಾರೆ ಈ ಸುದ್ದಿ ಜನರಲ್ಲಿ ಕುತೂಹಲವನ್ನು ಮೂಡಿಸುತ್ತಿದೆ . ಹೌದು ನಿಜ ಪಶ್ಚಿಮ ಘಟ್ಟಗಳ ಕಾರಣದಿಂದ ಈ ಮಾರ್ಗದಲ್ಲಿ ಪ್ರಯಾಣ ಸಾಮಾನ್ಯವಾಗಿ ೮ - ೧೦ ಗಂಟೆಯವರೆಗೆ ಹಿಡಿಯುತ್ತದೆ ಆದರೆ ಈಗ ಹೊಸ ರೈಲು ಮತ್ತು ಹೊಸ ರೈಲು ಮಾರ್ಗದ ಮೂಲಕ ಮತ್ತು ಮೂಲಸೌಕರ್ಯ ಯೋಜನೆಗಳ ಮೂಲಕ ಈ ದೂರನ್ನು ಸುಮಾರು 5:00 ಗಂಟೆಗಳಿಗೆ ತರಲು ಪ್ರಯತ್ನಗಳು ನಡೆಯುತ್ತಿವೆ. ಈ ವಂದೇ ಭಾರತ್ ರೈಲು ಬೇಗ ತಲುಪುವುದರಿಂದ ಜನರಿಗೆ ಏನೇನು ಲಾಭಗಳಾಗುತ್ತವೆ : ಹೌದು ರೈಲು ಬೇಗ ತಲುಪುವುದರಿಂದ ಜನರಿಗೆ ಪ್ರಯಾಣ ಸಮಯ ಕಡಿಮೆಯಾಗುತ್ತದೆ ಮತ್ತು ವಯಸ್ಸಾದವರಿಗೆ ಕಡಿಮೆ ದಣಿವು ಕೂಡ ಆಗುತ್ತದೆ. ಹಾಗೂ ಎಲ್ಲರಿಗೂ ಕೂಡ ಆರಾಮದಾಯಕ ರೈಲು ಪ್ರಯಾಣವಾಗುತ್ತದೆ. ಈ ರೈಲಿನ ಸಮಯವನ್ನು ಕಡಿಮೆ ಮಾಡಲು ಕಾರಣವೇನು ಇಲ್ಲಿದೆ ನೋಡಿ ಸರಿಯಾದ ಕಾರಣ : ಸಾಮಾನ್ಯ ರೈಲುಗಳು ಈ ಮಾರ್ಗವನ್ನು ಕ್ರಮಿಸಲು ಸುಮಾರು 9-10 ಗಂಟೆಗಳನ್ನು ತೆಗೆದುಕೊಳ್ಳುತ್ತವೆ , ಹಿಂದುಸ್ತಾನ್ ಟೈಮ್ಸ್ ವರದಿಯ ಪ್ರಕಾರ ವಂದೇ ಭಾರತ್ ರೈಲು ಅದನ್ನು ಕೇವಲ 5:00 ವರೆಗೆ ಕಡಿಮೆ ಮಾಡಬಹುದು, ಏಕೆಂದರೆ ಇದು ವ್ಯಾಪಾರಗಳಿಗೆ ಮತ್ತು ಪ್ರಯಾಣಿಕರಿಗೆ ಮತ್ತು ರಜಾ ದಿನಗಳಿಗೆ ಹೆಚ್ಚು ಅಗತ್ಯವಿರುವ ಅನುಕೂಲತೆಯನ್ನು ನೀಡುತ್ತದೆ ಹಾಗಾಗಿ ಸಮಯವನ್ನು ಕಡಿಮೆ ಮಾಡಲಾಗಿದೆ ಎಂದು ವರದಿ ಪ್ರಕಾರ ತಿಳಿಸಲಾಗಿದೆ. ಈ ರೈಲು ಬೇಗ ತಲುಪುವುದರಿಂದ ಬೆಂಗಳೂರು ತುಮಕೂರು ಹಾಸನ ಮತ್ತು ಮಂಗಳೂರು ಈ ನಾಲ್ಕು ಜಿಲ್ಲೆಗಳಿಗೂ ಕೂಡ ತುಂಬಾ ಅನುಕೂಲವಾಗಲಿದೆ ಏಕೆಂದರೆ ಇದು 50,000 ಕೋಟಿ ರೂಪಾಯಿಯ ಅಂದಾಜು ಬಜೆಟ್ ಅನ್ನು ಕಡಿಮೆ ಮಾಡುತ್ತದೆ. ಆದಕಾರಣ ಈ ಸುದ್ದಿಯು ಎಲ್ಲ ಜನರಿಗೆ ಸಂತೋಷವನ್ನು ತಂದುಕೊಟ್ಟಿದೆ. ಈ ವಂದೇ ಭಾರತ್ ರೈಲು ಆದಷ್ಟು ಬೇಗ ಸಂಚಾರ ಮಾಡಲಾಗಿದೆ ಎಂದು ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ತಿಳಿಸಿದ್ದಾರೆ. ಇದು ಪ್ರತಿಯೊಬ್ಬರಿಗೂ ಸಂತೋಷದ ಸುದ್ದಿಯೇ ಯಾಕೆ ಏಕೆಂದರೆ ವ್ಯಾಪಾರಸ್ಥರಿಗೆ ಮತ್ತು ವಯಸ್ಸಾದವರಿಗೆ ತುಂಬಾ ಅನುಕೂಲವಾಗಿದೆ. ೮ ರಿಂದ 10 ಗಂಟೆವರೆಗೆ ಚಲಿಸುವಂತಹ ಒಂದು ರೈಲು 5:00ಗೆ ಒಳಗೆ ಚಲಿಸುತ್ತದೆ ಅಂದರೆ ಎಲ್ಲರಿಗೂ ಕೂಡ ಸಹಿಸುದ್ದೀನಿ ಅಲ್ಲವೇ.. ಹಾಗಾಗಿ ದಕ್ಷಿಣ ಕನ್ನಡ ಜನರಿಗೆ ಕೇಂದ್ರ ಸರ್ಕಾರದಿಂದ ಹೊಸ ವರ್ಷಕ್ಕೆ ಒಂದು ಸಹಿಸುದ್ದಿಯನ್ನು ಕೊಡಲಾಗಿದೆ.
ಹೊಸ ವರ್ಷದ ಸಂಭ್ರಮದ ವೇಳೆ ನಮ್ಮ ಮೆಟ್ರೋಗೆ ಪ್ರಯಾಣಿಕರಿಂದ ಬಾರಿ ಸ್ಪಂದನೆ ಸಿಕ್ಕಿದೆ ಪಾರ್ಟಿ, ಶಾಪಿಂಗ್ ,ಪ್ರವಾಸಿ ತಾಣಗಳು ಮತ್ತು ವಿವಿಧ ಕಾರ್ಯಕ್ರಮಗಳಿಗೆ ತೆರಳಿದ ಜನರು ಖಾಸಗಿ ವಾಹನಗಳ ಬದಲಿಗೆ ಮೆಟ್ರೋವನ್ನು ಆಯ್ಕೆ ಮಾಡಿಕೊಂಡಿರುವುದು ಆದಾಯ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ.
ರಾಜ್ಯದಲ್ಲಿ ನಡೆಯುತ್ತಿರುವ ಸಿಎಂ ಬದಲಾವಣೆ ಕುರಿತು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಪ್ರತಿಕ್ರಿಯಿಸಿದರು.
ಕೋಗಿಲು ಲೇಔಟ್ ಒತ್ತುವರಿ ತೆರವು ವಿಚಾರ ಕುರಿತು ಮತ್ತೆ ಡಿಸಿಎಂ ಡಿ ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು, ಇದರಲ್ಲಿ ಓಲೈಕೆ ರಾಜಕಾರಣದ ಪ್ರಶ್ನೆಯೇ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಹೊಸ ವರ್ಷಾಚರಣೆಯಂದು ಸಾರ್ವಜನಿಕರ ಅನುಕೂಲಕ್ಕಾಗಿ ನಮ್ಮ ಮೆಟ್ರೋ ನೇರಳೆ, ಹಸಿರು ಹಾಗೂ ಹಳದಿ ಮಾರ್ಗಗಳ ರೈಲು ಸೇವೆಗಳ ಸಮಯವನ್ನು ವಿಸ್ತರಿಸಲಾಗಿದೆ.
ಬೆಟ್ಟಿಂಗ್ ದಂಧೆ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿದ್ದ ಕಾಂಗ್ರೆಸ್ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಅವರಿಗೆ ಷರತ್ತುಬದ್ಧ ಜಾಮೀನು. ₹2000 ಕೋಟಿ ಹಗರಣದ ವಿವರ ತಿಳಿಯಿರಿ.
ಬೆಳಗಾವಿಯ ಅತಿವೃಷ್ಟಿ ಸಂತ್ರಸ್ತರು ರಾಜ್ಯ ಸರ್ಕಾರದ ದ್ವಂದ್ವ ನೀತಿಯ ವಿರುದ್ಧ ಬೀದಿಗಿಳಿದಿದ್ದಾರೆ. ಬೆಂಗಳೂರಿನ ವಲಸಿಗರಿಗೆ ಫ್ಲ್ಯಾಟ್ ನೀಡುವ ಸರ್ಕಾರ, 381 ಮನೆಗಳನ್ನು ಕಳೆದುಕೊಂಡ ಬೆಳಗಾವಿಯ ಸಂತ್ರಸ್ತರಿಗೆ ಕೇವಲ ₹1.20 ಲಕ್ಷ ಪರಿಹಾರ ನೀಡಿ ಭರವಸೆ ಮರೆತಿದೆ ಎಂದು ಸಂತ್ರಸ್ತರು ಆಕ್ರೋಶ
© H16news.online . All Rights Reserved. Designed by H16news.online